Publish Date: Sun, 08 Jan 2023 (20:03 IST)
Updated Date: Sun, 08 Jan 2023 (20:14 IST)
ಸ್ಯಾಂಟ್ರೋ ರವಿ ಪ್ರಕರಣ ಕುರಿತು ಕೊಪ್ಪಳದಲ್ಲಿ ಮಹಿಳಾ ಕಾಂಗ್ರೆಸ್ ರಾಜಾಧ್ಯಕ್ಷೆ ಪುಷ್ಪ ಅಮರನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಇದನ್ನು ಸಾರಾಸಗಟಾಗಿ ಖಂಡಿಸುತ್ತೇವೆ. ಸ್ಯಾಂಟ್ರೋ ರವಿಯ ಅನಾಚಾರಗಳನ್ನು ಬಯಲಿಗೆಳೆಯುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತದೆ. ಸ್ಯಾಂಟ್ರೋ ರವಿಯಿಂದ ಮಹಿಳೆಯರಿಗೆ ಅನ್ಯಾಯವಾಗಿರುವುದರಿಂದ ಮಹಿಳಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದು ತಿಳಿಸಿದರು. BJP ವಿರುದ್ಧ ನಾವು ಎಷ್ಟೇ ಹೋರಾಟ ಮಾಡಿದರೂ ಇವರು ಕಮಿಷನ್ ದಂಧೆ ಹೆಚ್ಚು ಮಾಡುತ್ತಲೇ ಇದ್ದಾರೆ. BBMP, ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗಾಗಿ ಶೇ 50ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ. ಇವರ ಕಮಿಷನ್ ದಂಧಗೆ PSI ಹಗರಣವೇ ದೊಡ್ಡ ಸಾಕ್ಷಿ. ಇವರ ಕಮಿಷನ್ ದಂಧೆ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ ಗುತ್ತಿದಾರ ಸಂತೋಷ್ ಆತ್ಮಹತ್ಯೆ ಎಂದು ಹೇಳಿದ್ರು.