Webdunia - Bharat's app for daily news and videos

Install App

ಕೊನೆಗೂ ವಿಧಾನಸೌಧಕ್ಕೆ ಬಂದ ರಾಜ್ಯಪಾಲರು: ತಾವೇ ಕರೆದೊಯ್ದ ಸಿಎಂ ಸಿದ್ದರಾಮಯ್ಯ

Krishnaveni K
ಗುರುವಾರ, 22 ಜನವರಿ 2026 (11:25 IST)
Photo Credit: X
ಬೆಂಗಳೂರು: ಸಂಘರ್ಷಗಳ ಬಳಿಕ ಕೊನೆಗೂ ಇಂದು ರಾಜ್ಯಪಾಲರು ಅಧಿವೇಶನದಲ್ಲಿ ಭಾಷಣ ಮಾಡಲು ವಿಧಾನಸೌಧಕ್ಕೆ ಬಂದಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸ್ವಾಗತಿಸಿದ್ದಾರೆ.

ಮನರೇಗಾ ಯೋಜನೆಗೆ ತಿದ್ದುಪಡಿ ಮಾಡಿದ ಕೇಂದ್ರದ ವಿರುದ್ಧ ಚರ್ಚೆಗೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನಕ್ಕೆ ಮೊದಲು ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಗೆ ಭಾಷಣ ಮಾಡಬೇಕಿತ್ತು. ಆದರೆ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೆಲವು ತಿದ್ದುಪಡಿಗೆ ಸೂಚಿಸಿದ್ದ ರಾಜ್ಯಪಾಲರು ಇಲ್ಲದೇ ಹೋದರೆ ಭಾಷಣ ಮಾಡಲ್ಲ ಎಂದಿದ್ದರು.

ಇದು ರಾಜ್ಯ ಸರ್ಕಾರ ಮತ್ತು ಗವರ್ನರ್ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು. ಆದರೆ ಈಗ ಕೊನೆಗೂ ರಾಜ್ಯಪಾಲರು ವಿಧಾನಸೌಧಕ್ಕೆ ಬಂದಿದ್ದಾರೆ. ಅವರನ್ನು ಸ್ವತಃ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯುಟಿ ಖಾದರ್ ಸ್ವಾಗತಿಸಿದ್ದು ವಿಧಾನಸೌಧದೊಳಗೆ ಕರೆತಂದಿದ್ದಾರೆ.

ಇಂದು, ಭಾಷಣದಲ್ಲಿ ಸರ್ಕಾರ ಸಿದ್ಧಪಡಿಸಿರುವ ಎಲ್ಲಾ ಅಂಶಗಳನ್ನು ಗವರ್ನರ್ ಓದುವ ಸಾಧ್ಯತೆಯಿಲ್ಲ. ಕೇಂದ್ರದ ವಿರುದ್ಧ ಇರುವ ಕೆಲವು ಅಂಶಗಳನ್ನು ಕೈ ಬಿಟ್ಟು ಭಾಷಣ ಮಾಡುವ ಸಾಧ್ಯತೆಯಿದೆ. ಸದ್ಯಕ್ಕೆ ಅವರು ಅಧಿವೇಶನಕ್ಕೆ ಬಂದಿರುವುದರಿಂದ ಕೊಂಚ ಮಟ್ಟಿಗೆ ವಿವಾದ ತಣ್ಣಗಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಪಟ್ಟಿಗೆ ಸೇರಿಸಲು ನಿರಾಕರಿಸಿದ್ದಕ್ಕೆ ಅನ್ಯ ಕೋಮಿನವರಿಂದ ಅಧಿಕಾರಿ ಮೇಲೆ ಹಲ್ಲೆ: ಬಿಜೆಪಿ ಆಕ್ರೋಶ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಎಂತೆಂಥಾ ಕ್ರೇಜಿ ಫ್ರೆಂಡ್ಸ್ ಇರ್ತಾರೆ ಗುರೂ... ಗೆಳೆಯ ಫೋನ್ ಎತ್ತಿಲ್ಲ ಎಂದು ಫ್ರೆಂಡ್ಸ್ ಗ್ಯಾಂಗ್ ಮಾಡಿದ್ದೇನು ನೋಡಿ Video

ಅಯ್ಯೋ ನಿಮ್ಮನ್ನು ನೀವೇ ಮೂರ್ಖ ಅನ್ನೋದು, ನಿಮ್ಮ ಮತದಾರರನ್ನೇ ಈಡಿಯಟ್ ಅನ್ನೋದಾ... ರಾಹುಲ್ ಗಾಂಧಿಗೆ ಬಿಜೆಪಿ ತಿರುಮಂತ್ರ

ಪೆಟ್ರೋಲ್ ಹಾಕಿಸಿ ಓಡೋಗ್ತೀಯಾ...ಖದೀಮ ಕಾರು ಚಾಲಕನಿಗೆ ಬಂಕ್ ಸಿಬ್ಬಂದಿ ಪಾಠ ಕಲಿಸಿದ ರೀತಿ ನೋಡಿ Video

ಮುಂದಿನ ಸುದ್ದಿ
Show comments