Select Your Language

Notifications

webdunia
webdunia
webdunia
webdunia

ಕನ್ನಡ ಬರುತ್ತಾ ಎಂದು ರಾಹುಲ್ ಗಾಂಧಿಗೆ ಕೇಳಿದ್ರೆ ಸಸ್ಪೆಂಡ್ ಆಗ್ತಿದ್ರಿ: ಸಿದ್ದರಾಮಯ್ಯ ಟ್ರೋಲ್

Siddaramaiah

Krishnaveni K

ಮೈಸೂರು , ಮಂಗಳವಾರ, 2 ಸೆಪ್ಟಂಬರ್ 2025 (09:17 IST)

ಮೈಸೂರು: ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕನ್ನಡ ನಾಡಿಗೆ ಬಂದಿದ್ದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಕನ್ನಡ ಬರುತ್ತಾ ಎಂದು ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲೇ ತಮಾಷೆ ಮಾಡಿದ್ದರು. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಇದೇ ಪ್ರಶ್ನೆ ರಾಹುಲ್ ಗಾಂಧಿಗೆ ಕೇಳಿದ್ರೆ ಸಸ್ಪೆಂಡ್ ಆಗ್ತಿದ್ರಿ ಎಂದಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಅಖಿ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾಗಿದ್ದರು. ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ್ ಥ್ಯಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಗಣ್ಯರಿದ್ದರು.

ತಮ್ಮ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳಿಗೆ ‘ಯೂ ನೋ ಕನ್ನಡ’ ಎಂದು ತಮಾಷೆ ಮಾಡಿದ್ದರು. ಇದಕ್ಕೆ ರಾಷ್ಟ್ರಪತಿಗಳು ಮುಗುಳ್ನಕ್ಕರು. ತಮ್ಮ ಸರದಿ ಬಂದಾಗ ಭಾಷಣದಲ್ಲಿ ದ್ರೌಪದಿ ಮುರ್ಮು, ನನಗೆ ಎಲ್ಲಾ ಭಾಷೆಯೂ ಇಷ್ಟ. ಕನ್ನಡವೂ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ ಎಂದು ನಗುತ್ತಲೇ ಕೌಂಟರ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಮ್ಮ ರಾಜ್ಯಕ್ಕೆ ಬಂದ ರಾಷ್ಟ್ರಪತಿಗಳಿಗೆ ಈ ರೀತಿ ಹೇಳಿ ಸಿಎಂ ಸಿದ್ದು ಅವಮಾನ ಮಾಡಿದರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ಇದೇ ಪ್ರಶ್ನೆಯನ್ನು ರಾಹುಲ್ ಗಾಂಧಿಗೋ, ಸೋನಿಯಾ ಗಾಂಧಿಗೋ ಕೇಳಿ ನೋಡಿ, ನಂತ್ರ ನೀವೇ ಸಸ್ಪೆಂಡ್ ಆಗ್ತೀರಿ ಎಂದು ಕೆಲವರು ಕಾಲೆಳೆದಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ಈ ಜಿಲ್ಲೆಗಳಿಗೆ ಕಾದಿದೆ ಭಾರೀ ಮಳೆ