Publish Date: Fri, 01 Sep 2017 (18:53 IST)
Updated Date: Fri, 01 Sep 2017 (18:55 IST)
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂವರು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಖಾತೆ ಹಂಚಿಕೆ ಮಾಡಿದ್ದಾರೆ.
ನೂತನ ಸಚಿವರಾದ ಎಚ್.ಎಂ.ರೇವಣ್ಣರಿಗೆ ಸಾರಿಗೆ ಖಾತೆ, ಆರ್.ಬಿ.ತಿಮ್ಮಾಪುರ್ಗೆ ಅಬಕಾರಿ ಖಾತೆ, ಗೀತಾ ಮಹಾದೇವ್ ಪ್ರಸಾದ್ಗೆ ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಖಾತೆಯನ್ನು ನೀಡಿದ್ದಾರೆ.
ಸಾರಿಗೆ ಖಾತೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿಯವರ ಖಾತೆ ಬದಲಿಸಿ ಗೃಹಖಾತೆಯನ್ನು ನೀಡಿದ್ದಾರೆ.
ಅರಣ್ಯ ಖಾತೆ ಸಚಿವ ರಮಾನಾಥ್ ರೈಗೆ ಗೃಹ ಖಾತೆ ನೀಡಲಾಗುತ್ತಿದೆ ಎನ್ನುವ ವರದಿಗಳ ಮಧ್ಯೆ ಕೊನೆಯ ಗಳಿಗೆಯಲ್ಲಿ ಸಿಎಂ ತಮ್ಮ ನಿರ್ಧಾರ ಬದಲಿಸಿದ್ದಾರೆ ಎನ್ನಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.