Select Your Language

Notifications

webdunia
webdunia
webdunia
webdunia

ಮಾನ ಮರ್ಯಾದೆ ಇದ್ರೆ ಸಿಎಂ ರಾಜೀನಾಮೆ ಕೊಡಬೇಕಿತ್ತು- ಬಿಎಸ್ ವೈ ವಾಗ್ದಾಳಿ

ಮಾನ ಮರ್ಯಾದೆ ಇದ್ರೆ ಸಿಎಂ ರಾಜೀನಾಮೆ ಕೊಡಬೇಕಿತ್ತು- ಬಿಎಸ್ ವೈ ವಾಗ್ದಾಳಿ
ಶಿವಮೊಗ್ಗ , ಗುರುವಾರ, 27 ಜೂನ್ 2019 (13:25 IST)
ಶಿವಮೊಗ್ಗ : ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕೆ ಅಡ್ಡಿಪಡಿಸುವುದು ನಾವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.




ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಿಎಂ ಗ್ರಾಮವಾಸ್ತವ್ಯ ಮಾಡುವಂತಹ ಸಮಯವಲ್ಲ. ರಾಜ್ಯದಲ್ಲಿ ಇರುವ ಬರ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲಿ, ನಂತರ ಗ್ರಾಮವಾಸ್ತವ್ಯ ಮಾಡಲಿ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.


ಲೋಕಸಭಾ ಚುನಾವವಣೆ ಸೋಲಿನಿಂದ ಹೆಚ್,ಡಿ.ಕೆಗೆ ಹತಾಶೆಯಾಗಿದೆ. ಮಾನಮರ್ಯಾದೆ ಇದ್ರೆ ಅವರು ರಾಜೀನಾಮೆ ಕೊಡಬೇಕಿತ್ತು. ರಾಜ್ಯದಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಅರಿಯಲಿ. ಎಲ್ಲ ಸಮಸ್ಯೆ ಅರಿತ ಮೇಲೆ ಸಿಎಂ ಗ್ರಾಮವಾಸ್ತವ್ಯ ಮಾಡಲಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯಂತರ ಚುನಾವಣೆ ಬರುವ ಪ್ರಶ್ನಯೇ ಇಲ್ಲ- ಹೊರಟ್ಟಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು