Publish Date: Wed, 11 Jan 2023 (16:05 IST)
Updated Date: Wed, 11 Jan 2023 (16:09 IST)
ಸ್ಮಶಾನ ಕಾರ್ಮಿಕರ ಜೊತೆಯಲ್ಲೇ ಕುಳಿತು ಸಿಎಂ ಉಪಹಾರ ಸೇವಿಸಿದಾರೆ.ಸಿಎಂ ಬೊಮ್ಮಾಯಿಗೆ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಗೋವಿಂದ ಕಾರಜೋಳ ಹಾಗೂ ಆರಗ ಜ್ಞಾನೇಂದ್ರ ಸಾಥ್ ನೀಡಿದ್ರು.
ಇದೆ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಸ್ಮಶಾನ ನೌಕರರನ್ನು ಸತ್ಯ ಹರಿಶ್ಚಂದ್ರ ಬಳಗ ಎಂದು ನಾಮಕರಣ ಮಾಡಿದ್ರು.ಸ್ಮಶಾನ ಕಾರ್ಮಿಕರಿಗೆ ಸಂಬಳವಿರಲಿ,ಉದ್ಯೋಗ ಕೂಡ ಇರಲಿಲ್ಲ.ಪೌರಕಾರ್ಮಿಕರ ರೀತಿಯಲ್ಲಿ ಸ್ಮಶಾನಕಾರ್ಮಿಕರಿಗೂ ಖಾಯಂ ಮಾಡ್ತಿದ್ದೇವೆ.ಬೇರೆ ಎಲ್ಲ ವೃತ್ತಿಗಳ ರೀತಿ ಪೌರ ನೌಕರರು ಕೂಡ ಸತ್ಯ ಹರಿಶ್ಚಂದ್ರರ ಪ್ರತಿಮೆ ನನಗೆ ಯಾರು ಕೊಟ್ಟಿರಲಿಲ್ಲ.ಈಗ ಸತ್ಯ ಹರಿಶ್ಚಂದ್ರರ ಪ್ರತಿಮೆಯನ್ನ ಕೊಟ್ಟಿದ್ದಾರೆ ಈ ಪ್ರತಿಮೆಯನ್ನು ನಾನು ಪೂಜೆ ಮಾಡುವ ದೇವರ ಮನೆಯಲ್ಲೇ ಇಡುತ್ತೇನೆ ಎಂದು ಹೇಳಿದ್ರು