Publish Date: Mon, 09 Jan 2023 (18:23 IST)
Updated Date: Mon, 09 Jan 2023 (18:26 IST)
ಪ್ರಧಾನಿ ಮೋದಿಯವರು 12ಕ್ಕೆ ಹುಬ್ಬಳ್ಳಿಗೆ ಬರ್ತಿದ್ದಾರೆ.ಯುವಜನೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ.7 ದಿನಗಳ ಕಾಲ ಯುವಜನ ಉತ್ಸವ ನಡೆಯುತ್ತಿದೆ.ಅದರ ಉದ್ಘಾಟನೆಗೆ ಮೋದಿ ಬರ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.
ಅಲ್ಲದೇ ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಜನವರಿ 19 ಕ್ಕೆ ಮತ್ತೆ ಮೋದಿಯವರು ಕರ್ನಾಟಕಕ್ಕೆ ಬರ್ತಾರೆ.ನಾರಯಣಪುರಕ್ಕೆ ಪಿಎಂ ಬರ್ತಾರೆ.ಕಲ್ಬುರ್ಗಿಯಲ್ಲಿ ಬಂಜಾರ ಸಮುದಾಯದ ಸಮಾವೇಶ ಮಾಡಬೇಕೆಂದುಕೊಂಡಿದ್ದೇವೆ.ಅದರಲ್ಲಿ ಕೂಡ ಭಾಗಿಯಾಗುವ ಸಾದ್ಯತೆಯಿದೆ ಎಂದು ಹೇಳಿದ್ರು.
ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆಗೆ ಸಿಎಂ ಬೊಮ್ಮಾಯಿ ನಿರಾಕರಿಸಿದಾರೆ.ಪುಸ್ತಕ ವಿಚಾರದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಮೌನವಹಿಸಿದ್ದಾರೆ.