Select Your Language

Notifications

webdunia
webdunia
webdunia
webdunia

Chinnaswamy stampede : ಪಹಲ್ಗಾಮ್ ದಾಳಿಗೆ ಕೇಂದ್ರದ ಮೇಲೆ ಗೂಬೆ ಕೂರಿಸಿದ್ರಿ ಈಗೇನಂತೀರಿ

RCB

Krishnaveni K

ಬೆಂಗಳೂರು , ಗುರುವಾರ, 5 ಜೂನ್ 2025 (14:27 IST)
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ರಾಜ್ಯ ಬಿಜೆಪಿ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಈಗ ಯಾಕೆ ಮೌನವಾಗಿದೆ ಎಂದು ಪ್ರಶ್ನೆ ಮಾಡಿದೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಘಟಕ, ಪಹಲ್ಗಾಮ್ ದಾಳಿ ನಡೆದಾಗ ಕೇಂದ್ರದ ಮೇಲೆ ಗೂಬೆ ಕೂರಿಸಿದವರು ಈಗೆಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದೆ.
 
 
ಪಹಲ್ಗಾಮ್‌ ಉಗ್ರದಾಳಿ ನಡೆದಾಗ ಕೇಂದ್ರದ ಭದ್ರತಾ ವೈಫಲ್ಯದ ಬಗ್ಗೆ ದಿನನಿತ್ಯ ಕೂಗುಮಾರಿಗಳಂತೆ ಊಳಿಡುತ್ತಿದ್ದ ಕಾಂಗ್ರೆಸ್‌ ನಾಯಕರು ಈಗೆಲ್ಲಿದ್ದಾರೆ ? ಎಂದು ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.
 
 
ಕೇಂದ್ರದ ವೈಫಲ್ಯ ಎಂದು ಸದಾ ಟೀಕಾ ಪ್ರಹಾರ ನಡೆಸುವ ಸಚಿವ ಸಂತೋಷ್ ಲಾಡ್, ಖರ್ಗೆ ಗೆ ಈಗ ಮಾತು ಬಂದ್ ಆಗಿದೆಯೇ ಎಂದು ಪ್ರಶ್ನೆ ಮಾಡಿದೆ.
 
ಪೂರ್ವ ನಿರ್ಧರಿತ ಕಾರ್ಯಕ್ರಮವೊಂದನ್ನು ನಿಭಾಯಿಸಲು ಸಾಧ್ಯವಾಗದ 
ಕಾಂಗ್ರೆಸ್
 ಪಕ್ಷದ ಶತಮೂರ್ಖರು ಕೇಂದ್ರ ಸರ್ಕಾರದ ನಿಲುವುಗಳನ್ನು ಟೀಕಿಸಿದ್ದರು. ಆರ್‌ಸಿಬಿ ವಿಜಯಯಾತ್ರೆಯನ್ನು ನಿರ್ವಹಿಸಲು ಸಾಕಷ್ಟು ಸಮಯ ಲಭಿಸಿದ್ದರೂ ಸರ್ಕಾರ ಸಂಪೂರ್ಣ ಎಡವಿದೆ.
 
ರಾಜ್ಯ ಸರ್ಕಾರದ ಭದ್ರತೆಯ ವೈಫಲ್ಯಕ್ಕೆ ಅಮಾಯಕರು ಬಲಿಯಾಗಿದ್ದಾರೆ. ಭದ್ರತಾ ವ್ಯವಸ್ಥೆಯ ಬಗ್ಗೆ ಕಾಂಗ್ರೆಸ್‌ ವಿದೂಷಕರು ತುಟಿ ಬಿಚ್ಚದಿರುವುದೇಕೆ? ಎಂದು ಪ್ರಶ್ನೆ ಮಾಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

Chinnaswamy stampede: ಇದೊಂದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡವಲ್ಲವೇ: ಸಿ.ಟಿ.ರವಿ