Select Your Language

Notifications

webdunia
webdunia
webdunia
webdunia

Bengaluru Stampede: ಇದೊಂದು ಕೆಲಸ ಮಾಡಿದ್ರೆ ಚಿನ್ನಸ್ವಾಮಿಯಲ್ಲಿ ದುರಂತವಾಗ್ತಾನೇ ಇರಲಿಲ್ಲ

RCB

Krishnaveni K

ಬೆಂಗಳೂರು , ಶುಕ್ರವಾರ, 6 ಜೂನ್ 2025 (13:41 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರ ಸಾವಾಗಿತ್ತು. ಇದೊಂದು ಕೆಲಸ ಮಾಡಿದ್ರೆ ಅಂದು ದುರಂತವೇ ನಡೆಯುತ್ತಿರಲಿಲ್ಲ.

ಚಿನ್ನಸ್ವಾಮಿಯಲ್ಲಿ ಅಷ್ಟೊಂದು ಜನ ಸೇರಲು ಮತ್ತು ನೂಕು ನುಗ್ಗಲಾಗಲು ಒಂದೇ ಒಂದು ಕಾರಣ ಉಚಿತ ಆಫರ್. ಸಾಮಾನ್ಯವಾಗಿ ಚಿನ್ನಸ್ವಾಮಿ ಮೈದಾನಕ್ಕೆ ಪಂದ್ಯಗಳನ್ನು ನೋಡಲು ಒಂದೋ ಟಿಕೆಟ್ ಸಿಗಲ್ಲ, ಸಿಕ್ಕರೆ ಬಲು ದುಬಾರಿಯಾಗಿರುತ್ತದೆ.

ಆದರೆ ಈಗ ಉಚಿತವಾಗಿ ಕೊಹ್ಲಿ ಮತ್ತು ಆರ್ ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಬಹುದು ಎಂಬ ಒಂದೇ ಉದ್ದೇಶಕ್ಕೆ ಜನ ಸಾಗರದಂತೆ ಬಂದರು. ಒಂದು ವೇಳೆ ಟಿಕೆಟ್ ದರ ಕನಿಷ್ಠ 300 ರೂ.ಗಳನ್ನಾದರೂ ಫಿಕ್ಸ್ ಮಾಡಿದ್ದರೆ ಅರ್ಧಕ್ಕರ್ಧ ಜನ ಕಡಿಮೆಯಾಗುತ್ತಿದ್ದರು. ಈ ಹಣವನ್ನು ಸೈನಿಕರ ನಿಧಿಗೋ, ಇನ್ಯಾವುದೋ ಒಳ್ಳೆಯ ಕೆಲಸಕ್ಕೆ ಬಳಸಿಕೊಂಡಿದ್ದರೂ ಸಾಕಿತ್ತು.

ಆದರೆ ಟಿಕೆಟ್ ದರವಿದೆ ಎಂದು ಗೊತ್ತಾಗಿದ್ದರೆ ಇಷ್ಟೊಂದು ಜನ ಸೇರುತ್ತಿರಲಿಲ್ಲ. ಇದೊಂದು ಕೆಲಸ ಮಾಡಿದ್ದರೆ ಈ ದುರಂತವೇ ಸಂಭವಿಸುತ್ತಿರಲಿಲ್ಲವೇನೋ. ಆದರೆ ಈಗ ದುರಂತವಾಗಿ ಹೋಗಿದೆ. ಇದು ಎಂದೆಂದಿಗೂ ಆರ್ ಸಿಬಿ ಗೆಲುವಿನ ಜೊತೆಗೆ ಕಪ್ಪು ಚುಕ್ಕೆಯಾಗಿ ಉಳಿಯಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಲ್ಲ ನೀವು ರಾಜೀನಾಮೆ ಕೊಡ್ಬೇಕು ಎಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹೀಗೆ ಹೇಳೋದಾ