Webdunia - Bharat's app for daily news and videos

Install App

ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ, 3 ಮಕ್ಕಳನ್ನು ಮಾಡಿ: ಚಕ್ರವರ್ತಿ ಸೂಲಿಬೆಲೆ

Krishnaveni K
ಸೋಮವಾರ, 10 ಮಾರ್ಚ್ 2025 (15:14 IST)
Photo Credit: X
ಮಂಗಳೂರು: ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದ್ದಾರೆ. ಇದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ಉಳ್ಳಾಲದ ಕುತ್ತಾರಿನಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ‘ಎಲ್ಲಿಯವರೆಗೆ ಲವ್ ಜಿಹಾದ್ ಬಗ್ಗೆ ಮಾತನಾಡೋಣ, ಸ್ವಲ್ಪ ಬದಲಾವಣೆ ತರೋಣ. ನಮ್ಮ ಹುಡುಗರಿಗೂ ಹೇಳೋಣ. ಪಾಪ ಎಷ್ಟು ದಿನ ಅಂತ ಮದುವೆಯಾಗಿಲ್ಲ, ಹುಡುಗಿ ಸಿಕ್ತಿಲ್ಲ ಎಂದು ಹೇಳೋಣ. ಎಷ್ಟು ದಿನ ಅಂತ ನಮ್ದೇ ಹೆಣ್ಣು ಮಕ್ಕಳನ್ನೇ ನೋಡೋಣ,  ಸ್ವಲ್ಪ ಅನ್ಯಧರ್ಮದ ಬಗ್ಗೆಯೂ ನೋಡೋಣ ಎಂದಿದ್ದಾರೆ.

ನಮ್ಮ ಸಮಾಜದಲ್ಲಿ ಹೆಣ್ಣು ಸಿಕ್ತಿಲ್ಲ ಎಂದು ಹೇಳುವಾಗ ಪಕ್ಕದ ಸಮಾಜದಲ್ಲೂ ಅದೇ ಸಮಸ್ಯೆಯಿದೆಯಲ್ಲಾ. ಧೈರ್ಯ ತುಂಬ್ರಲ್ಲಾ’ ಎಂದು ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಅವರು ಹಿಂದೂ ಸಮಾಜದ ಉದ್ದಾರಕ್ಕೆ ಮೂರು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದೂ ಸಲಹೆ ನೀಡಿದ್ದಾರೆ.

ಉದ್ಯಮಿಗಳು ನಿಮ್ಮ ಬಳಿ ಕೆಲಸ ಮಾಡುವರಿಗೆ ಮೂರನೇ ಮಗು ಮಾಡಿಕೊಳ್ಳಲು ಆಫರ್ ಕೊಡಿ ಎಂದು ಹೇಳಿದ್ದಾರೆ. ಎಲ್ಲರಿಗೂ ಮಕ್ಕಳ ವಿದ್ಯಾಭ್ಯಾಸದ್ದೇ ಅಲ್ವಾ ಸಮಸ್ಯೆ? ನೀವು ಯಾರು ಯಾರು ನಿಮ್ಮ ಮನೆಯಲ್ಲಿ, ತೋಟದಲ್ಲಿ ಕೆಲಸ ಮಾಡುವವರಿಗೆ ಆಫರ್ ಕೊಡಿ. ನಾನು ಕೆಲಸಕ್ಕೆ ಇಟ್ಟುಕೊಳ್ಳಬೇಕು ಎಂದರೆ ಮೂರು ಮಕ್ಕಳನ್ನು ಮಾಡಬೇಕು ಎಂದು ಕಂಡೀಷನ್ ಹಾಕಿ. ಒಂದು ವೇಳೆ ನೀನು ಮೂರನೇ ಮಗು ಮಾಡಿಕೊಂಡರೆ ಅದರ ವಿದ್ಯಾಭ್ಯಾಸದ ಖರ್ಚು, ನೋಡಿಕೊಳ್ಳುವ ಖರ್ಚು ನಾನು ಮಾಡ್ತೇನೆ ಎಂದು ಮುಂದೆ ಬನ್ರಿ ಅಲ್ಲಾ..’ ಎಂದು ಚಾಲೆಂಜ್ ನೀಡಿದ್ದಾರೆ. ಹಿಂದೂ ಸಮಾಜದ ಉದ್ದೇಶಕ್ಕೆ ಇದು ಅಗತ್ಯ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments