Publish Date: Thu, 18 Jul 2019 (13:17 IST)
Updated Date: Thu, 18 Jul 2019 (13:22 IST)
ಮೈತ್ರಿ ಸರಕಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಬೇಕಿದ್ದರೆ ಕೈ ಪಡೆಯ ಶಾಸಕರೊಬ್ಬರು ದಿಢೀರ್ ಆಗಿ ಆಸ್ಪತ್ರೆಗೆ ಸೇರುವ ಮೂಲಕ ಶಾಕ್ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರಿದ್ದ ಹೋಟೆಲ್ ನಿಂದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ ದಾಖಲು ಆಗಿದ್ದಾರೆ.
ತಡರಾತ್ರಿ ಮುಂಬೈಗೆ ಹಾರಿದ್ದ ಶಾಸಕ ಶ್ರೀಮಂತ ಪಾಟೀಲ್ ಸಧ್ಯ ಸೇಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಧಾನಸಭೆಗೆ ವಿಶ್ವಾಸ ಮತ ದಿನವೇ ಇವರು ಆಸ್ಪತ್ರೆಗೆ ದಾಖಲು ಆಗಿರೋದು ಹಲವು ಚರ್ಚೆಗೆ ಕಾರಣವಾಗಿದೆ.
ಕಲಾಪಕ್ಕೆ ಗೈರು ಆಗುತ್ತಿರುವ ಕುರಿತು ಶ್ರೀಮಂತ ಪಾಟೀಲ್ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.