Select Your Language

Notifications

webdunia
webdunia
webdunia
webdunia

ಮೈತ್ರಿ ಸರಕಾರಕ್ಕೆ ಶಾಕ್: ವಿಪಕ್ಷ ಸಾಲಿನಲ್ಲಿ ಕೂಡ್ತೇವೆ ಎಂದ ಪಕ್ಷೇತರ ಶಾಸಕರು

ಮೈತ್ರಿ ಸರಕಾರಕ್ಕೆ ಶಾಕ್: ವಿಪಕ್ಷ ಸಾಲಿನಲ್ಲಿ ಕೂಡ್ತೇವೆ ಎಂದ ಪಕ್ಷೇತರ ಶಾಸಕರು
ಬೆಂಗಳೂರು , ಶನಿವಾರ, 13 ಜುಲೈ 2019 (17:11 IST)
ಸಚಿವ ಸ್ಥಾನ ತೊರೆದು ಅತೃಪ್ತರ ಜತೆ ಗುರುತಿಸಿಕೊಂಡಿದ್ದ ಪಕ್ಷೇತರ ಇಬ್ಬರು ಶಾಸಕರು ಇದೀಗ ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳೋದಕ್ಕೆ ರೆಡಿಯಾಗಿದ್ದಾರೆ.

ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿರೋ ಪಕ್ಷೇತರ ಶಾಸಕರಾದ ಹೆಚ್.ನಾಗೇಶ್ ಹಾಗೂ ಆರ್. ಶಂಕರ್ ಅವರು ಅಧಿವೇಶನದಲ್ಲಿ ತಮಗೆ ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಬೇಕು. ಹೀಗಂತ ಸ್ಪೀಕರ್ ಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.

ಸಮ್ಮಿಶ್ರ ಸರಕಾರಕ್ಕೆ ಬೆಂಬಲ ನೀಡಿದ್ದರಿಂದ ಈ ಹಿಂದೆ ಆಡಳಿತ ಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ವಿಪಕ್ಷ ಸ್ಥಾನದಲ್ಲಿ ಕೂಡುವುದಕ್ಕೆ ಸಿದ್ಧವಿರೋದಾಗಿ ಹೇಳಿದ್ದಾರೆ.

ಇಬ್ಬರೂ ಪಕ್ಷೇತರ ಶಾಸಕರು ಮೈತ್ರಿ ಸರಕಾರದಲ್ಲಿ ಸಚಿವರಾಗಿದ್ದರು. ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ಕೊಟ್ಟು ಮುಂಬೈ ಸೇರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಧಿವೇಶನಕ್ಕೆ ಹಾಜರ್ ಎಂದ ರಾಮಲಿಂಗಾರೆಡ್ಡಿ