Select Your Language

Notifications

webdunia
webdunia
webdunia
webdunia

ಕೈತಪ್ಪಿದ ನಿಗಮ ಮಂಡಳಿ; ಸಂಭ್ರಮಿಸಿದ ಜೆಡಿಎಸ್ ಕಾರ್ಯಕರ್ತರು

ನಿಗಮ ಮಂಡಳಿ
ಚಿಕ್ಕಬಳ್ಳಾಪುರ , ಬುಧವಾರ, 6 ಮಾರ್ಚ್ 2019 (19:04 IST)
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್  ಮೈತ್ರಿ ಸರಕಾರ ಆಡಳಿತದಲ್ಲಿದೆ. ಆದರೆ ನಿಗಮ ಮಂಡಳಿ ಕೈತಪ್ಪಿದ ಕಾರಣ ಆಡಳಿತಾರೂಢ ಜೆಡಿಎಸ್ ಕಾರ್ಯಕರ್ತರೇ ವಿಜಯೋತ್ಸವ ಆಚರಿಸಿದ ಘಟನೆ ನಡೆದಿದೆ.

ಶಾಸಕ ಡಾ. ಕೆ. ಸುಧಾಕರ್ ಗೆ ನಿಗಮ ಮಂಡಳಿ ಕೈ ತಪ್ಪಿದ ಹಿನ್ನೆಲೆಯಲ್ಲಿ ಈ ಸಂಭ್ರಮಾಚರಣೆ ನಡೆದಿದೆ. ಜೆಡಿಎಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು ಜೆಡಿಎಸ್ ಪರ ಘೋಷಣೆ ಕೂಗಿದರು.

ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕರಿಗೆ ತಪ್ಪಿದ ನಿಗಮ ಮಂಡಳಿ ಅದ್ಯಕ್ಷ ಸ್ಥಾನದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಿಡಿಗೇಡಿಗಳು ಬೆಂಕಿ ಹಚ್ಚಿದ್ದೆಲ್ಲಿ?