Select Your Language

Notifications

webdunia
webdunia
webdunia
webdunia

ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳಿಬ್ಬರು ಸಿಸಿಬಿ ಬಲೆಗೆ

ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳಿಬ್ಬರು ಸಿಸಿಬಿ ಬಲೆಗೆ
bangalore , ಸೋಮವಾರ, 25 ಅಕ್ಟೋಬರ್ 2021 (21:50 IST)
ಬೆಂಗಳೂರು: ಬಿಡಿಎ ಭ್ರಷ್ಟ ಅಧಿಕಾರಿಗಳಿಬ್ಬರು 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಎಇಇ ಮಂಜುನಾಥ್, ಸರ್ವೆಯರ್ ಜಯರಾಮ್ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸೆರೆ ಸಿಕ್ಕಿದ್ದಿದ್ದಾರೆ.
ಆರ್.ಟಿ. ನಗರದಲ್ಲಿ ಹಳೇ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಕಾಮಗಾರಿ ನಡೆಯುತ್ತಿತ್ತು. ಸ್ಥಳಕ್ಕೆ ತೆರಳಿ ಕಾಮಗಾರಿ ಸ್ಥಗಿತಕ್ಕೆ ಬಿಡಿಎ ಎಇಇ ಸೂಚಿಸಿದ್ದರು. ಬಳಿಕ ಸರ್ವೆಯರ್ ಜಯರಾಮ್‌ ಸಂಪರ್ಕಿಸಲು ಹೇಳಿದ್ದರು.
ಸರ್ವೆಯರ್ ಜಯರಾಮ್‌ರನ್ನು ದೂರುದಾರ ಸಂಪರ್ಕಿಸಿದ್ದರು. 5 ಲಕ್ಷ ರೂಪಾಯಿ ಲಂಚ ನೀಡುವಂತೆ ಸರ್ವೆಯರ್ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟ ಅಧಿಕಾರುಗಳು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.  ಲಂಚದ ಹಣ ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭಯದೊಡನೆ ಜನರಿಗೆ ಮತ್ತೊಂದು ಶಾಕ್!