Webdunia - Bharat's app for daily news and videos

Install App

ಗಾಂಜಾ ಸೇವನೆ: ಆರೋಪಿಗಳು ಅಂದರ್

Webdunia
ಶನಿವಾರ, 26 ಜನವರಿ 2019 (17:53 IST)
ಸಾರ್ವಜನಿಕ ಮೈದಾನದ ಬಳಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು  ಬಂಧಿಸಲಾಗಿದೆ.  
 ಮಂಗಳೂರು ನಗರದ ಕದ್ರಿ ಸಾರ್ವಜನಿಕ ಮೈದಾನದ ಬಳಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು  ಇಕೊನಾಮಿಕ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಕೊಡಿಯಾಲ್ಬೈಲ್ ಶರಾಜ್, ಕದ್ರಿಯ ಚಿರಾಗ್, ಕಾರ್ಸ್ಟ್ರೀಟ್ ನಿವಾಸಿಗಳಾದ ಅನಂತ್, ಪವನ್ ಬಂಧಿತ ಆರೋಪಿಗಳು. ಗಾಂಜಾ ಸೇವನೆ ಆರೋಪದಲ್ಲಿ ಕುಶಾಲನಗರ ನಿವಾಸಿ ರೋಹನ್, ಕಾಂಜಂಗಾಡ್ ನಿವಾಸಿ ಸದಾಶಿವ ಕಾಮತ್, ಬಿಜೈ ಕಾಪಿಕಾಡು ನಿವಾಸಿ ಭದ್ರೇಶ್, ಕೊಟ್ಟಾರ ನಿವಾಸಿ ಸುನೀಲ್ ಭಟ್ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಿಂದ 14.900 ರೂ. ಮೌಲ್ಯದ ಸುಮಾರು 500 ಗ್ರಾಂ ತೂಕದ ಗಾಂಜಾ ಹಾಗೂ 58ಸಾವಿರ ರೂ. ಮೌಲ್ಯದ 4 ಮೊಬೈಲ್ಪೋನ್ಗಳು ಹಾಗೂ ಸುಮಾರು10 ಸಾವಿರ ರೂ. ಮೌಲ್ಯದ ಅಮಲಿನ ಮಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಹಾಗೂ ನಗದು 3800 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಸೊತ್ತುಗಳ ಮೌಲ್ಯ 1,35,700 ರೂ. ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಮೇಲಧಿಕಾರಿಗಳ ನಿರ್ದೇಶನದಂತೆ ನಾರ್ಕೋಟಿಕ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಣೇಶನ ಮೂರ್ತಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಕೂರಿಸಬೇಕು ಇಲ್ಲಿದೆ ವಿವರ

ಥೈರಾಯ್ಡ್ ಇದ್ದರೆ ಜೀವನ ಪರ್ಯಂತ ಮಾತ್ರೆ ತೆಗೆದುಕೊಳ್ಳಬೇಕೇ: ಡಾ ಪದ್ಮಿನಿ ಪ್ರಸಾದ್ ಏನು ಹೇಳಿದ್ದರು

ಗಣೇಶ ಹಬ್ಬಕ್ಕೆ ಮತ್ತೆ ಬಂತು ಕಠಿಣ ರೂಲ್ಸ್: ಗಣೇಶನನ್ನು ಕೂರಿಸುವವರು ತಪ್ಪದೇ ಗಮನಿಸಿ

ಗುಡ್ ನ್ಯೂಸ್: ಬಡ ಕ್ಯಾನ್ಸರ್ ರೋಗಿಗಳಿಗಾಗಿ ಡಾ ಸಿಎನ್ ಮಂಜುನಾಥ್ ಮಾಡಿದ್ದೇನು ನೋಡಿ

ಪ್ರಧಾನಿ, ಸಿಎಂ ಪದಚ್ಯುತಿ ಮಸೂದೆ ಮಂಡನೆಗೆ ಸಿದ್ದರಾಮಯ್ಯ ವಿರೋಧ: ನಿಮಗ್ಯಾಕೆ ಭಯ ಸರ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments