Select Your Language

Notifications

webdunia
webdunia
webdunia
webdunia

ಕ್ಯಾ. ಮಣಿವಣ್ಣನ್ ವರ್ಗಾವಣೆ : ಸಚಿವ ಹೀಗೆ ಹೇಳೋದಾ

ಕ್ಯಾ. ಮಣಿವಣ್ಣನ್ ವರ್ಗಾವಣೆ : ಸಚಿವ ಹೀಗೆ ಹೇಳೋದಾ
ಕಾರವಾರ , ಮಂಗಳವಾರ, 12 ಮೇ 2020 (18:59 IST)
ರಾಜ್ಯ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕ್ಯಾ. ಪಿ.ಮಣಿವಣ್ಣನ್ ವರ್ಗಾವಣೆ ಕುರಿತು ಕಾರ್ಮಿಕ ಸಚಿವ ಮಾತನಾಡಿದ್ದಾರೆ.

ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸರ್ಕಾರದ ಒಂದು ಸಹಜ ಪ್ರಕ್ರಿಯೆ. ಇದಕ್ಕೆ ರಾಜ್ಯ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕ್ಯಾ. ಪಿ.ಮಣಿವಣ್ಣನ್ ಹೊರತಲ್ಲ. ಹೀಗಂತ ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.  

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಡಳಿತಾತ್ಮಕ ಹಿತದೃಷ್ಠಿಯಿಂದ ಅಧಿಕಾರಿಗಳ ವರ್ಗಾವಣೆಯನ್ನು ಕೈಗೊಳ್ಳುವುದು ಸಹಜ. ಆಡಳಿತದ ಹಿತದೃಷ್ಠಿಯಿಂದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕ್ಯಾ. ಪಿ. ಮಣಿವಣ್ಣನ್ ಅವರ ವರ್ಗಾವಣೆಯಾಗಿದೆ.

ಈಗಾಗಲೇ ಅವರು ಇಲಾಖೆಯಲ್ಲಿ ಸುಮಾರು ಎರಡು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಸಹಜವಾಗಿ ಅವರು ವರ್ಗಾವಣೆಗೊಂಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸಚಿವ ಹೆಬ್ಬಾರ್ ಸ್ಪಷ್ಟಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನ ಒಂದು ಡಜನ್ ಕೊರೊನಾ ವೈರಸ್ ಕೇಸ್ ಪತ್ತೆ