Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಕ್ಯಾಬಿನೆಟ್​ ಸರ್ಜರಿ

ಸದ್ಯದಲ್ಲೇ ಕ್ಯಾಬಿನೆಟ್​ ಸರ್ಜರಿ
bangalore , ಬುಧವಾರ, 4 ಮೇ 2022 (19:57 IST)
ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಸಚಿವ ಸಂಪುಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ದೆಹಲಿಗೆ ಹೋದ ನಂತರ ಮಾತಾಡ್ತೀನಿ ಎಂದಿದ್ದಾರೆ ಎಂದು ಚುಟುಕಾಗಿ ಹೇಳಿದರು. ಈಗಾಗಲೇ ತಿಳಿಸಿರುವಂತೆ ಬಜೆಟ್​ನಲ್ಲಿ ಘೋಷಿಸಿದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಪ್ರಸ್ತಾವನೆಗಳ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶೇ.80 ಆದೇಶ ಹೊರಡಿಸಲಾಗಿದೆ. ಕಾನೂನು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಉಳಿದ ಶೇ.20ಕ್ಕೂ ಆದೇಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ‌ ಹೇಳಿದರು. ಆದೇಶದ ಮುಂದಿನ ಹಂತವಾಗಿ ಅನುಷ್ಠಾನಕ್ಕೆ ಕಾಲಮಿತಿ ವಿಧಿಸಲೆಂದು ಪೂರ್ವ ನಿಗದಿಯಂತೆ ಇಲಾಖಾವಾರು‌ ಸಭೆಗಳನ್ನು ಆರಂಭಿಸಿದ್ದು, ಪ್ರತಿಯೊಂದು ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮದ ಅನುಸಾರ ಕಾಲಮಿತಿ ಗೊತ್ತುಪಡಿಸಲಿದ್ದು, ಇದೆಲ್ಲ ಆಡಳಿತಾತ್ಮಕ ಪ್ರಕ್ರಿಯೆ ಭಾಗವಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

‘ಅಶ್ವತ್ಥ್ ನಾರಾಯಣ ಮೋಸ್ಟ್ ಕರಪ್ಟೆಡ್​’