Webdunia - Bharat's app for daily news and videos

Install App

ಲೈಸನ್ಸ್ ಪಡೆಯದೆ ವ್ಯಾಪಾರ, ವಹಿವಾಟು-ಎಪಿಎಂಸಿ ವರ್ತಕರಿಗೆ ಸರ್ಕಾರದಿಂದ ಶಾಕ್

Webdunia
ಬುಧವಾರ, 11 ಅಕ್ಟೋಬರ್ 2023 (14:00 IST)
ಲೈಸನ್ಸ್​ ಪಡೆದು ವ್ಯಾಪಾರ ವಹಿವಾಟು ನಡೆಸದೇ ಇರುವ ಎರಡು ಸಾವಿರ ಎಪಿಎಂಸಿ ವ್ಯಾಪಾರಸ್ಥರು, ದಲಾಳಿ ಪರವಾನಗಿಗಳನ್ನು ನಿಯಮಾನುಸಾರ ರದ್ದುಪಡಿಸಲು ಸರ್ಕಾರ ಮುಂದಾಗಿದೆ.ಲೈಸನ್ಸ್ ಪಡೆದು ವ್ಯಾಪಾರ, ವಹಿವಾಟು ನಡೆಸದೇ ಇರುವ ವರ್ತಕರಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ.ಎರಡು ಸಾವಿರ ಎಪಿಎಂಸಿ ವ್ಯಾಪಾರಸ್ಥರು, ದಲಾಲರ ಪರವಾನಗಿಗಳನ್ನು ನಿಯಮಾನುಸಾರ ರದ್ದುಪಡಿಸಲು ನಿರ್ಧರಿಸಲಾಗಿದೆ.ಇದಕ್ಕೆ ವರ್ತಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
 
ಕೃಷಿ ಮಾರಾಟ ಇಲಾಖೆ ನಿರ್ದೇಶಕರು ರಾಜ್ಯದ ಎಲ್ಲ ಎಪಿಎಂಸಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.ಮೂರು ವರ್ಷ ವ್ಯಾಪಾರ ಮಾಡದ ವರ್ತಕರ ಲೈಸನ್ಸ್ ರದ್ದುಗೊಳಿಸಬೇಕೆಂದು ತಿಳಿಸಲಾಗಿದೆ.ಕಳೆದ ಮೂರು ವರ್ಷ ವ್ಯಾಪಾರ ವಹಿವಾಟು ಮಾಡದೇ ಇರುವ ಕರ್ನಾಟಕ ರಾಜ್ಯದ ಮಾರ್ಕೆಟ್ ಯಾರ್ಡ್‌ನಲ್ಲಿರುವ ವ್ಯಾಪಾರಸ್ಥರಿಗೆ ಈ ನೊಟೀಸ್‌ ನೀಡಲಾಗಿದೆ.ಇದಕ್ಕೆ ಏಳು ದಿನದಲ್ಲಿ ಪ್ರತಿಕ್ರಿಯಿಸಲು ಇಲಾಖೆ ತಿಳಿಸಲಾಗಿದೆ.2020ರಿಂದ ಎರಡು ವರ್ಷ ಕೊರೊನಾದಿಂದಾಗಿ ಯಾವುದೇ ವಹಿವಾಟು ನಡೆದಿಲ್ಲ.ಅಲ್ಲದೇ ನಾನಾ ಕಾರಣಗಳಿಗೆ ವಹಿವಾಟು ಅಷ್ಟಾಗಿ ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯದ 2 ಸಾವಿರ ಲೈಸನ್ಸ್ ನೊಟೀಸ್ ನೀಡಲಾಗಿದೆ.ಕೊರೊನಾ, ಅತಿವೃಷ್ಟಿ ಹಾಗೂ ಬರಗಾಲದ ಕಾರಣದಿಂದ ಎಲ್ಲವೂ ತಲೆಕೆಳಗಾಗಿದೆ.ಇಂತಹ ಸಂದರ್ಭದಲ್ಲಿ ವ್ಯಾಪಾರಸ್ಥರು ಕೈಕಟ್ಟಿ ಕುಳಿತಿದ್ದಾರೆ.ಹೀಗಿದ್ದಾಗ ಲೈಸನ್ಸ್ ರದ್ದುಗೊಳಿಸುವುದು ಎಷ್ಟು ಸರಿ? ಎಂದು ವರ್ತಕರು ಅಸಮಾಧಾನ ಹೊರಹಾಕಿದರು, ಈ ವರ್ಷ ಬರಗಾಲದಿಂದಾಗಿ ಎಪಿಎಂಸಿಗೆ ಕೃಷಿ ಉತ್ಪನ್ನಗಳು ಬರುತ್ತಿಲ್ಲ.ಈ ಮಧ್ಯೆ ಎಪಿಎಂಸಿ ನೂತನ ಕಾಯ್ದೆ ಪ್ರಕಾರ, ಎಪಿಎಂಸಿಯಾಚೆಗೂ ವಹಿವಾಟು ನಡೆಸಬಹುದಾಗಿದೇ ಅನೇಕ ವರ್ತಕರು ರೈತರ ಹೊಲಕ್ಕೆ ಹೋಗಿ ವ್ಯಾಪಾರ ಮಾಡಿದ್ದಾರೆ. ಹಾಗಾಗಿ ಎಪಿಎಂಸಿ ಯಾರ್ಡ್‌ನಲ್ಲಿ ವಹಿವಾಟು ಕಡಿಮೆಯಾಗಿದೆ.ಹೀಗಾಗಿ ವರ್ತಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments