Select Your Language

Notifications

webdunia
webdunia
webdunia
webdunia

ತಮಿಳುನಾಡು ಸಿಎಂ ಜೊತೆಗೆ ಡಿಕೆಶಿಗೆ ವ್ಯಾಪಾರ ಸಂಬಂಧ ಇದೆ : ಯೋಗೇಶ್ವರ್

ತಮಿಳುನಾಡು ಸಿಎಂ ಜೊತೆಗೆ ಡಿಕೆಶಿಗೆ ವ್ಯಾಪಾರ ಸಂಬಂಧ ಇದೆ : ಯೋಗೇಶ್ವರ್
ರಾಮನಗರ , ಗುರುವಾರ, 7 ಸೆಪ್ಟಂಬರ್ 2023 (10:02 IST)
ರಾಮನಗರ : ತಮಿಳುನಾಡು ಸಿಎಂ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ವ್ಯಾಪಾರ ಸಂಬಂಧ ಇದೆ. ಬೆಂಗಳೂರಿನಲ್ಲಿ ಇವರಿಬ್ಬರದ್ದು ಬಹಳ ವ್ಯವಹಾರಗಳಿವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾವೇರಿ ನೀರು ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಸರಿಯಾಗಿ ನಿಭಾಯಿಸುತ್ತಿಲ್ಲ. ಕಾವೇರಿ ಕೊಳ್ಳದ ಜನರ ಬಗ್ಗೆ ಅವರಿಗೆ ಅರಿವಿಲ್ಲ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ನಮ್ಮ ನೀರು ಹರಿದುಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

ನಾಳೆ ಅವರನ್ನು ಪ್ರಶ್ನೆ ಕೇಳಿದ್ರೆ ಹೌದಾ.. ಯೋಗೇಶ್ವರ್ ಹೇಳಿದ್ನಾ ಅಂತ ಉಡಾಫೆಯಾಗಿ ಮಾತಾಡ್ತಾರೆ. ತಮಿಳುನಾಡು ಸಿಎಂ ಜೊತೆಗೆ ಡಿಕೆಶಿಗೆ ವ್ಯಾಪಾರ ಸಂಬಂಧ ಇದೆ. ಬೆಂಗಳೂರಿನಲ್ಲಿ ಇವರಿಬ್ಬರದ್ದು ಬಹಳ ವ್ಯವಹಾರಗಳಿವೆ. ರಾಜಕೀಯವಾಗಿ ಡಿಕೆಶಿ-ಸ್ಟಾಲಿನ್ ಪಾಟ್ನರ್ಸ್ ಅದಕ್ಕಾಗಿ ಕರ್ನಾಟಕ, ಮಂಡ್ಯ, ರಾಮನಗರ ಜನರ ಹಿತ ಅವರಿಗೆ ಬೇಕಿಲ್ಲ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಹೆಸರು ಬದಲಾವಣೆಗಿಂತ ಜನರ ಬದುಕು ಬದಲಾವಣೆ ಮುಖ್ಯ: ಶಿವಕುಮಾರ್