Select Your Language

Notifications

webdunia
webdunia
webdunia
webdunia

ಮೈಸೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಬಸ್ ಅಪಘಾತ; 9 ಮಂದಿ ಸಾವು, 25 ಮಂದಿಗೆ ಗಾಯ

ಮೈಸೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಬಸ್ ಅಪಘಾತ; 9 ಮಂದಿ ಸಾವು, 25 ಮಂದಿಗೆ ಗಾಯ
ಉಡುಪಿ , ಭಾನುವಾರ, 16 ಫೆಬ್ರವರಿ 2020 (06:49 IST)
ಉಡುಪಿ : ಮೈಸೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಬಸ್ ಅಪಘಾತಕ್ಕೀಡಾದ ಪರಿಣಾಮ  9 ಮಂದಿ ಸಾವನಪ್ಪಿದ್ದು, 25 ಮಂದಿ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಸ್ ಕೆ ಬಾರ್ಡರ್ ಬಳಿ ನಡೆದಿದೆ.


ಮೃತರನ್ನು ಮೈಸೂರಿನ ನಂಜನಗೂಡು  ಸಮೀಪದ ಸೆಂಚುರಿ ವೈಟಲ್ ರೆಕಾರ್ಡ್ ಕಂಪೆನಿಯ ನೌಕರರು ಎಂಬುದಾಗಿ ತಿಳಿದುಬಂದಿದೆ. ಮೈಸೂರಿನಿಂದ ಪ್ರವಾಸಕ್ಕೆ ಹೊರಟ ಇವರ ತಂಡ ಶೃಂಗೇರಿ, ಹೊರನಾಡನ್ನು ಸುತ್ತಿ ಬಳಿಕ ಉಡುಪಿ ಮಲ್ಪೆ ಬೀಚ್ ಗೆ ಬರುವಾಗ ಮಾರ್ಗ ಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ಬಳಿಕ ಬಲಗಡೆಯ ಬಂಡೆಗೆ ಅಪ್ಪಳಿಸಿದೆ.


ಅಪಘಾತದ ತೀವ್ರತೆಗೆ 9 ಮಂದಿ ಸಾವನಪ್ಪಿದ್ದು, 25 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ಸರ್ಕಲ್ ಇನ್ ಸ್ಪೆಕ್ಟರ್ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೋಡೆತ್ತಿನ ಬಂಡಿ ಓಡಿಸಿದ ಶಾಸಕ