Select Your Language

Notifications

webdunia
webdunia
webdunia
webdunia

ಕಾರ್ ಅಪಘಾತ ಪ್ರಕರಣ : ಮಗನ ಬಗ್ಗೆ ಆರ್. ಅಶೋಕ್ ಹೇಳ್ತಿರೋದೇನು?

ಕಾರ್ ಅಪಘಾತ ಪ್ರಕರಣ : ಮಗನ ಬಗ್ಗೆ ಆರ್. ಅಶೋಕ್ ಹೇಳ್ತಿರೋದೇನು?
ಬೆಂಗಳೂರು , ಗುರುವಾರ, 13 ಫೆಬ್ರವರಿ 2020 (19:38 IST)
ಹೊಸಪೇಟೆ ಹತ್ತಿರದಲ್ಲಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರೋ ಕೇಸ್ ಗೆ ಸಂಬಂಧಿಸಿದಂತೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಆ್ಯಕ್ಸಿಡೆಂಟ್ ಕೇಸ್ ನಲ್ಲಿ ಆಗಲಿ ಇಲ್ಲವೇ ಎಫ್ ಐ ಆರ್ ನಲ್ಲಿ ತಮ್ಮ ಪುತ್ರ ನ ಹೆಸರು ಇಲ್ಲ. ವಿನಾಕಾರಣ ಹೆಸರು ಎಳೆದು ತರಲಾಗುತ್ತಿದೆ ಅಂತ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ್ ಪುತ್ರ ಶರತ್ ಕಾರು ಚಲಾಯಿಸುತ್ತಿದ್ದರು. ಆಗ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಯುವಕ ಹಾಗೂ ಕಾರಿನಲ್ಲಿದ್ದ ಯುವಕನೊಬ್ಬ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಕೇಸ್ ಗೆ ನನಗೂ ಸಂಬಂಧ ಇಲ್ಲ ಅಂತ ಅಶೋಕ್ ಹೇಳಿದ್ದಾರೆ.

ಕೇಸ್ ನ ತನಿಖೆ ನಡೆಯುತ್ತಿದೆ. ಹೀಗಾಗಿ ಈ ಬಗ್ಗೆ ಹೆಚ್ಚು ಮಾತನಾಡೋದಿಲ್ಲ ಅಂತ ಸಚಿವ ಆರ್.ಅಶೋಕ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರತ್ಯೇಕ ಕೃಷಿ ಬಜೆಟ್ ; ಯಡಿಯೂರಪ್ಪ ರೈತರೊಂದಿಗೆ ಮಾಡಿದ್ದೇನು