Publish Date: Thu, 23 Aug 2018 (20:25 IST)
Updated Date: Thu, 23 Aug 2018 (20:35 IST)
ದೇಶದ ಎಲ್ಲಾ ಪವಿತ್ರ ನದಿಗಳಲ್ಲೂ ಅಗಲಿದ ಮಾಜಿ ಪ್ರಧಾನಿ, ಬಿಜೆಪಿ ಧುರೀಣ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ವಿಸರ್ಜಿಸಲಾಯಿತು.
ರಾಜ್ಯದ ಮಂಡ್ಯ ಜಿಲ್ಲೆಯ ಪಶ್ಚಿಮ ವಾಹಿನಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಾಜಿ ಪ್ರಧಾನಿ ಅಟಲ್ ಜೀ ಅವರ ಚಿತಾಭಸ್ಮ ವಿಸರ್ಜನೆ ಮಾಡಲಾಯಿತು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪಶ್ಚಿಮ ವಾಹಿನಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ನನಗೆ ಅಟಲ್ ಜೀ ಅವರ ಚಿತಾಭಸ್ಮ ನೀಡಿದ್ದರು. ಅದನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಿದ್ದೇವೆ. ರಾಜ್ಯದ ಇನ್ನು ಕೆಲವು ನದಿಗಳಲ್ಲಿ ವಾಜಪೇಯಿಯವರ ಅಸ್ತಿ ವಿಸರ್ಜಿಸುತ್ತೇವೆ ಎಂದರು.
ಅಟಲ್ ಹಿರಿಯ ಮಗನಂತೆ ನಾನು ಅಸ್ತಿ ವಿಸರ್ಜಿಸಿದ್ದೇನೆ. ಆ ತೃಪ್ತಿ ನನಗಿದೆ ಎಂದು ಅಟಲ್ ನೆನೆದು ಬಿ.ಎಸ್.ಯಡಿಯೂರಪ್ಪನವರು ಭಾವುಕರಾದರು.