Select Your Language

Notifications

webdunia
webdunia
webdunia
webdunia

ವರನ ಕೊರಳಿಗೆ ತಾಳಿ ಕಟ್ಟಿದ ವಧು!

ವರನ ಕೊರಳಿಗೆ ತಾಳಿ ಕಟ್ಟಿದ ವಧು!
ಚಾಮರಾಜನಗರ , ಸೋಮವಾರ, 13 ಡಿಸೆಂಬರ್ 2021 (10:15 IST)
ಚಾಮರಾಜನಗರ: ಸಾಮಾನ್ಯವಾಗಿ ಮದುವೆಯೆಂದರೆ ವಧುವಿನ ಕೊರಳಿಗೆ ವರ ತಾಳಿ ಕಟ್ಟುತ್ತಾನೆ. ಆದರೆ ಈ ಮದುವೆಯಲ್ಲಿ ವರನ ಕುತ್ತಿಗೆಗೆ ವಧು ತಾಳಿ ಕಟ್ಟಿದ್ದಾಳೆ! ಹೀಗೊಂದು ಮದುವೆ ಚಾಮರಾಜನಗರದಲ್ಲಿ ನಡೆದಿದೆ.

ಎಲ್ಲಾ ಶಾಸ್ತ್ರಗಳು, ಆಚಾರಗಳಿಗೆ ತಿಲಾಂಜಲಿ ಇಟ್ಟು ಬಸವ ವಚನಗಳನ್ನು ಹೇಳುವ ಮೂಲಕ ವಿವಾಹ ಶಾಸ್ತ್ರ ನೆರವೇರಿಸಲಾಯಿತು. ರೈತ ಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಸಮಾಧಿ ಪಕ್ಕದಲ್ಲೇ ಈ ವಿವಾಹ ನೆರವೇರಿಸಲಾಗಿದೆ.

ವರ ರೈತನಾಗಿದ್ದು, ವಚನ ಕಲ್ಯಾಣ ಮಾಡಲಾಗಿದೆ. ಯಾವುದೇ ಬ್ಯಾಂಡ್, ವಾದ್ಯಗಳಿಲ್ಲದೇ, ಮಂತ್ರ ಘೋಷಗಳಿಲ್ಲದೇ ರುದ್ರಾಕ್ಷಿಯಿಂದಲೇ ಮಾಡಿದ ಮಾಂಗಲ್ಯ ಧಾರಣೆ ಮಾಡಿಸಿ ಮದುವೆ ಶಾಸ್ತ್ರ ನೆರವೇರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿಗೆ ಹೋಗುವುದನ್ನು ತಪ್ಪಿಸಲು ಸಾವಿನ ನಾಟಕವಾಡಿ ಸಿಕ್ಕಿಬಿದ್ದ!