Select Your Language

Notifications

webdunia
webdunia
webdunia
webdunia

ಸಂಪುಟದಿಂದ ಅನಂತಕುಮಾರ ಹೆಗಡೆ ವಜಾಗೊಳಿಸಲು ಬಿ.ಆರ್.ಪಾಟೀಲ ಒತ್ತಾಯ

ಸಂಪುಟದಿಂದ ಅನಂತಕುಮಾರ ಹೆಗಡೆ ವಜಾಗೊಳಿಸಲು ಬಿ.ಆರ್.ಪಾಟೀಲ ಒತ್ತಾಯ
ಕಲಬುರಗಿ , ಬುಧವಾರ, 27 ಡಿಸೆಂಬರ್ 2017 (09:42 IST)
ಸಂವಿಧಾನ ಬದಲಾವಣೆ ಮಾಡಲಿಕ್ಕೆ ನಾವು ಬಂದಿದ್ದೇವೆ ಎನ್ನುವ ಮೂಲಕ ಸಮಾಜದಲ್ಲಿ ಸ್ವಾಸ್ಥ್ಯಕ್ಕೆ ಧಕ್ಕೆ ಮಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಲು ಆಳಂದ ಶಾಸಕ ಬಿ. ಆರ್. ಪಾಟೀಲ್ ಒತ್ತಾಯಿಸಿದ್ದಾರೆ.

ರಾಷ್ಟ್ರಪತಿ ಭವನದ ಟ್ವಿಟ್ಟರ್ ಖಾತೆಗೆ ಟ್ವಿಟ್ ಮಾಡಿರುವ ಅವರು ಸಚಿವ ಅನಂತಕುಮಾರ್‌‌ ಹೆಗಡೆ ಅವರನ್ನು ಸಂಪುಟದಿಂದ ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗ ಸಂವಿಧಾನ ಬದಲಾವಣೆ ಮಾಡ್ತೇವೆ ಎಂದು ಹೇಳಿ ಮತ್ತೆ ವಿವಾದ ಭುಗಿಲೆಬ್ಬಿಸಿದ್ದಾರೆ ಎಂದು  ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕರ್ನಾಟಕ ಬಂದ್ ಗೆ ಜ್ಯೂನಿಯರ್ ಉಪೇಂದ್ರ ಸಾಥ್