Select Your Language

Notifications

webdunia
webdunia
webdunia
webdunia

ಬೊಮ್ಮಯಿ ಅವರಿಗೆ ಅವರ ಸರ್ಕಾರ ಉಳಿಸಿಕೊಳ್ಳೊಕ್ಕೆ ಆಗಿಲ್ಲ- ಎಂ ಬಿ ಪಾಟೀಲ್

ಎಂ ಬಿ ಪಾಟೀಲ್

geetha

bangalore , ಶುಕ್ರವಾರ, 2 ಫೆಬ್ರವರಿ 2024 (21:00 IST)
ಬೆಂಗಳೂರು-ನಿನ್ನೆ ಸಿಎಂ ಡಿನ್ನರ್ ಮೀಟಿಂಗ್ ವಿಚಾರವಾಗಿ ನಗರದಲ್ಲಿ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.ಎಲ್ಲಾ ಜಿಲ್ಲಾ ಉಸ್ತುವಾರಿ ಸೇರಿದ್ವಿ ಹಾಗೂ ಎಂಪಿ ಸ್ಥಾನದ ಸಂಯೋಜಕರು ನೇಮಿಸಿದ್ರು  ಸಚಿವರು ಮಾಹಿತಿಯನ್ನ ಕೊಟ್ರು.ಲೋಕಸಭಾ ಚುನಾವಣೆ ತಯಾರಿ ಉದ್ದೇಶದಿಂದ ನಿನ್ನೆ ಸಭೆ ಆಗಿದೆ .ಪಕ್ಷದ ಕಾರ್ಯಕ್ರಮಗಳನ್ನ ಯಾವ ರೀತಿ ಮಾಡಬೇಕು ಎಂಬುವುದು ಚರ್ಚೆ ಆಗಿದೆ  ಎಂದು ಎಂ ಬಿ ಪಾಟೀಲ್ ಹೇಳಿದ್ರು.
 
ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಅರ್ಥಮಾಡಿಕೊಳ್ಳಿ ತೇರಿಗೆಯನ್ನ ನಮ್ಮ ರಾಜ್ಯಗಳು ಕಟ್ಟುತ್ತಿವೆ.ಆಪ್ರಮಾಣದಲ್ಲಿ ನಮಗೆ ಅನುದಾನ ಬರುತ್ತಿಲ್ಲ‌.ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಡಲಾಗುತ್ತಿದೆ .ಈ ಹಿನ್ನಲೆ ಅವರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.ಇನ್ನೂ ಮಾಜಿ ಶಾಸಕ ಬಿ ಶಿವಾರಂ ಹೇಳಿಕೆ ವಿಚಾರವಾಗಿ ಅವರು ಹೇಳಿದ್ದು ಗೊತ್ತಿಲ್ಲ ಅವರ ಹೇಳಿಕೆ ನೋಡಿಕೊಂಡು ನಾನು ಮಾತಾಡುತ್ತೇನೆ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.
 
ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನ ಆಗುತ್ತೆ ಎಂಬ ಮಾಜಿ ಸಿಎಂ  ಬೊಮ್ಮಯಿ ಹೇಳಿಕೆ ವಿಚಾರವಾಗಿ ಎಂ ಬಿ.ಪಾಟೀಲ್ ಬೊಮ್ಮಯಿ ಅವರಿಗೆ ಅವರ ಸರ್ಕಾರ ಉಳಿಸಿಕೊಳ್ಳೊಕ್ಕೆ ಆಗಿಲ್ಲ.ಒಳ್ಳೆ ಅವಕಾಶ ಸಿಕ್ಕಿತ್ತು ನಾವು ಕೂಡ ಹೆಮ್ಮೆ ಪಟ್ಟಿದ್ವಿ.ಬುದ್ದಿವಂತ ಇದ್ದಾರೆ ಎಲ್ಲವನ್ನ ತಿಳಿದುಕೊಂಡು ಮುಖ್ಯಮಂತ್ರಿ ಆಗಿದ್ದಾರೆ ಆದ್ರೆ ಅವರ ಕೈಯಲ್ಲಿ ಸರ್ಕಾರವನ್ನ ಉಳಿಸಿಕೊಳ್ಳೊಕ್ಕೆ ಆಗಿಲ್ಲ.ಹೀನಾಯವಾಗಿ ಅವರ ನೇತೃತ್ವದಲ್ಲಿ ಪಕ್ಷ ಸೋತಿದೆ.ಯಾವ ನೈತಿಕತೆ ಇದೆ ಅವರಿಗೆ ಈ ಹೇಳಿಕೆ ಕೊಡೊಕ್ಕೆ  ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲು