ಊರಿಗೆ ಹೋಗಲು ಬಸ್ ಸಿಕ್ತಿಲ್ವಾ, ಬಿಎಂಟಿಸಿಯಿಂದ ಗುಡ್ ನ್ಯೂಸ್

Krishnaveni K
ಶುಕ್ರವಾರ, 23 ಜನವರಿ 2026 (12:19 IST)
ಬೆಂಗಳೂರು: ಈ ವಾರಂತ್ಯಕ್ಕೆ ಮೂರು ದಿನ ರಜೆಯಿರುವುದರಿಂದ ಬೆಂಗಳೂರಿನಿಂದ ಸಾಕಷ್ಟು ಜನ ಊರುಗಳತ್ತ ಮನೆ ಮಾಡಿದ್ದಾರೆ. ಊರಿಗೆ ಹೋಗಲು ಸಂಜೆ ಬಸ್ ಸಿಕ್ತಿಲ್ಲ ಎಂದು ಪರದಾಡುವವರಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ.

ಸಂಜೆಯಾದರೆ ಸಾಕು ಬಿಎಂಟಿಸಿ ಬಸ್ ಬೇಕಾದಷ್ಟು ಇರಲ್ಲ, ನಿಗದಿತ ಸಮಯಕ್ಕೆ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ಗೆ ತಲುಪಲು ಸಾಧ್ಯವಾಗಲ್ಲ ಎಂಬ ಕಂಪ್ಲೇಂಟ್ ಜನರಲ್ಲಿ ಇರುತ್ತದೆ. ವಾರಂತ್ಯಕ್ಕೆ ಸಾಕಷ್ಟು ಜನ ಊರಿಗೆ ಹೋಗುವುದರಿಂದ ಈ ಸಮಸ್ಯೆಯಾಗುತ್ತದೆ. ಅಲ್ಲದೆ ಕೆಎಸ್ ಆರ್ ಟಿಸಿ ಬಸ್ ಗಳಲ್ಲೂ ಸೀಟ್ ಇಲ್ಲ ಎಂಬ ಸಮಸ್ಯೆಯಿದೆ.

 ಈ ಬಾರಿ ಸೋಮವಾರವೂ ರಜೆಯಿರುವುದರಿಂದ ಸಾಕಷ್ಟು ಜನ ಊರುಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಕೆಎಸ್ ಆರ್ ಟಿಸಿ ಬಸ್ ಗಳು, ಖಾಸಗಿ ಬಸ್ ಗಳ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಇದರ ನಡುವೆ ಕೆಎಸ್ ಆರ್ ಟಿಸಿ ಬಸ್ ಗಳಿಗೆ ಕನೆಕ್ಟ್ ಮಾಡುವ ಬಿಎಂಟಿಸಿ ಬಸ್ ಗಳಲ್ಲೂ ನಾಳೆ ರಶ್ ಕಂಡುಬರಲಿದೆ.

ಹೀಗಾಗಿಯೇ ನಾಳೆ ಬಿಎಂಟಿಸಿ ಹೆಚ್ಚುವರಿ ಬಸ್ ಬಿಡಲು ತೀರ್ಮಾನಿಸಿದೆ. ನಾಳೆ ಹೆಚ್ಚುವರಿಯಾಗಿ 500 ಬಸ್ ಬಿಡಲಿದೆ. ಜೊತೆಗೆ ಬೆಂಗಳೂರಿನ ಕೆಲವು ಸುತ್ತಮುತ್ತಲ ಜಿಲ್ಲೆಗಳಿಗೂ ಬಿಎಂಟಿಸಿ ಬಸ್ ಗಳನ್ನು ಬಳಕೆ ಮಾಡಲು ತೀರ್ಮಾನಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಳಿಂಗ ಸರ್ಪವನ್ನು ಹಿಡಿಯಲು ಹೋದಾಗ ಉರಗ ತಜ್ಞನಿಗೇ ಏನು ಮಾಡ್ತು ನೋಡಿ: ಮೈ ನವಿರೇಳಿಸುವ ವಿಡಿಯೋ

ಮೀಸಲಾತಿ ಪರಿಗಣಿಸಿ, ಖಾಲಿ ಹುದ್ದೆ ಭರ್ತಿ ಮಾಡಿ: ರಾಜ್ಯ ಸರ್ಕಾರಕ್ಕೆ ಬಿವೈ ವಿಜಯೇಂದ್ರ ಒತ್ತಾಯ

ಓಮನ್‌ನಲ್ಲಿ ತೈಲ ಟ್ಯಾಂಕರ್‌ಗೆ ಇರಾನ್ ಕ್ಷಿಪಣಿ ಡಿಕ್ಕಿ ಬಳಿಕ ರಾಜಸ್ಥಾನದ ವ್ಯಕ್ತಿ ನಾಪತ್ತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಬೆಂಗಳೂರಿನಿಂದ ಹೊರಡಬೇಕಿದ್ದ 34 ವಿಮಾನಗಳು ರದ್ಧು

ಖಮೇನಿ ಹತ್ಯೆ ಖಂಡಿಸುವವರ ಬಗ್ಗೆ ಪರಮೇಶ್ವರ್‌ ಹೀಗಂದ್ರು

ಮುಂದಿನ ಸುದ್ದಿ
Show comments