Select Your Language

Notifications

webdunia
webdunia
webdunia
webdunia

ಕೇರಳದ ಗಡಿಭಾಗ ತಲಪಾಡಿ ಬಳಿ ಟೋಲ್ ಸಂಗ್ರಹಿಸದಂತೆ ಬಿಜೆಪಿ ಕಾರ್ಯಕರ್ತರು, ಶಾಸಕರಿಂದ ಪ್ರತಿಭಟನೆ

ಕೇರಳದ ಗಡಿಭಾಗ ತಲಪಾಡಿ ಬಳಿ ಟೋಲ್ ಸಂಗ್ರಹಿಸದಂತೆ ಬಿಜೆಪಿ ಕಾರ್ಯಕರ್ತರು, ಶಾಸಕರಿಂದ ಪ್ರತಿಭಟನೆ
ಮಂಗಳೂರು , ಬುಧವಾರ, 1 ಜನವರಿ 2020 (10:29 IST)
ಮಂಗಳೂರು : ಕೇರಳದ ಗಡಿಭಾಗ ತಲಪಾಡಿ ಬಳಿ ಟೋಲ್ ಸಂಗ್ರಹಿಸುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು, ಶಾಸಕರು ಪ್ರತಿಭಟನೆ ನಡೆಸಿದ್ದಾರೆ.



ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸದ ಹಿನ್ನಲೆಯಲ್ಲಿ ಟೋಲ್ ಸಂಗ್ರಹಿಸದಂತೆ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೂ ಕೂಡ ಕೇರಳದ ಗಡಿಭಾಗ ತಲಪಾಡಿ ಟೋಲ್ ಬಳಿ ನವಯುಗ ಕಂಪೆನಿಯಿಂದ ಟೋಲ್ ಸಂಗ್ರಹಿಸಲಾಗುತ್ತಿತ್ತು.


ಈ ಹಿನ್ನಲೆಯಲ್ಲಿ  ಬಿಜೆಪಿ ಕಾರ್ಯಕರ್ತರು ಹಾಗು ಶಾಸಕರು ಟ್ರೋಲ್ ಸಂಗ್ರಹವನ್ನು ವಿರೋಧಿಸಿ ಟೋಲ್ ಬಳಿ ಕುಳಿತು ತೀವ್ರ ಪ್ರತಿಭಟನೆ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜೋಡಿಯಿಂದ ನಡುರಸ್ತೆಯಲ್ಲಿ ಅಸಭ್ಯ ವರ್ತನೆ