Select Your Language

Notifications

webdunia
webdunia
webdunia
webdunia

ಸಾವರ್ಕರ್ ಗೋಮಾಂಸ ಸೇವಿಸುತ್ತಿದ್ದರು ಎಂದು ನಿಮ್ಮ ಮುಸ್ಲಿಂ ಪತ್ನಿ ಹೇಳಿದರೇ: ದಿನೇಶ್ ಗುಂಡೂರಾವ್ ಗೆ ಬಿಜೆಪಿ ಪ್ರಶ್ನೆ

Karnataka BJP

Krishnaveni K

ಬೆಂಗಳೂರು , ಗುರುವಾರ, 3 ಅಕ್ಟೋಬರ್ 2024 (13:59 IST)
ಬೆಂಗಳೂರು: ಕ್ರಾಂತಿಕಾರೀ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರು ಗೋಮಾಂಸ ಸೇವಿಸುತ್ತಿದ್ದರು ಎಂದು ವಿವಾದದ ಕಿಡಿ ಹೊತ್ತಿಸಿದ ಸಚಿವ ದಿನೇಶ್ ಗುಂಡೂರಾವ್ ಗೆ ಬಿಜೆಪಿ ಖಡಕ್ ಪ್ರಶ್ನೆ ಮಾಡಿದೆ.

ಗಾಂಧಿ ಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಸಾವರ್ಕರ್ ಒಬ್ಬ ಚಿತ್ಪಾವನ ಬ್ರಾಹ್ಮಣ. ಅವರು ಗೋಮಾಂಸ ಸೇವನೆ ಮಾಡುತ್ತಿದ್ದರು. ಅವರು ಗೋಹತ್ಯೆಗೂ ವಿರೋಧವಾಗಿರಲಿಲ್ಲ. ಅವರು ಮಾಡರ್ನ್ ಆಗಿದ್ದರು ಎಂದಿದ್ದರು.

ಅವರ ಹೇಳಿಕೆ ಬಿಜೆಪಿಯನ್ನು ಕೆರಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ ‘ಬ್ರಾಹ್ಮಣ ಸಮಾಜದ ವೀರ ಸಾವರ್ಕರ್ ಅವರು ಗೋಮಾಂಸ ಸೇವಿಸುತ್ತಿದ್ದರು ಎಂದು ನಿಮಗೆ ನಿಮ್ಮ ಬ್ರಾಹ್ಮಣ ಸಮಾಜದ ತಂದೆ ಗುಂಡೂರಾವ್ ಹೇಳಿದ್ದರೋ ಅಥವಾ ಮುಸ್ಲಿಂ ಸಮಾಜದ ನಿಮ್ಮ ಪತ್ನಿ ತಬಸ್ಸುಮ್ ಹೇಳಿದರೋ’ ಎಂದು ಪ್ರಶ್ನೆ ಮಾಡಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ವಿರ ಸಾವರ್ಕರ್ ಅವರ ಕೊಡುಗೆ ಅಪಾರ. ಅಂತಹ ಮಹನೀಯ ನಾಯಕನ ಬಗ್ಗೆ ಇಷ್ಟು ಕೀಳುಮಟ್ಟದ ಹೇಳಿಕೆ ನೀಡಿರುವ ದಿನೇಶ್ ಗುಂಡೂರಾವ್, ಮಹಾರಾಷ್ಟ್ರ ಮತ್ತು ಮರಾಠಿಗರ ಬಗ್ಗೆ ಕಾಂಗ್ರೆಸ್ ಗಿರುವ ಧ್ವೇಷ ಮನೋಭಾವವನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವೀರ ಸಾವರ್ಕರ ಮಾಂಸ ತಿನ್ನುತ್ತಿದ್ದ ಬ್ರಾಹ್ಮಣ: ವಿವಾದ ಸೃಷ್ಟಿಸಿದ ಸಚಿವ ದಿನೇಶ್ ಗುಂಡೂರಾವ್