Webdunia - Bharat's app for daily news and videos

Install App

ರಾತ್ರೋರಾತ್ರಿ ಬಿಜೆಪಿ ಶಾಸಕರು ಪ್ರತಿಭಟನೆ ಮಾಡಿದ್ಯಾಕೆ?

Webdunia
ಭಾನುವಾರ, 11 ನವೆಂಬರ್ 2018 (14:39 IST)
ರಾತ್ರೋರಾತ್ರಿ ಬಿಜೆಪಿ ಶಾಸಕರು ಪೊಲೀಸ್ ಕಮೀಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಬೆಳಗಾವಿಯಲ್ಲಿ ರಾತ್ರೋರಾತ್ರಿ ಬಿಜೆಪಿ ಶಾಸಕರ ಪ್ರತಿಭಟನೆ ನಡೆದಿದೆ. ಕೋಲ್ಡ್ ಸ್ಟೋರೇಜನಿಂದ ಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧರಣಿ ನಡೆದಿದೆ. ದಿಢೀರ್ ಆಗಿ ಬಿಜೆಪಿ ಇಬ್ಬರು ಶಾಸಕರಿಂದ ಪ್ರತಿಭಟನೆ ನಡೆಯಿತು.
ಬೆಳಗಾವಿ ಪೊಲೀಸ್ ಕಮೀಷನರ್ ಕಚೇರಿ ಎದುರು ಧರಣಿಯನ್ನು ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ನಡೆಸಿದರು.
ಪೊಲೀಸ್ ಪ್ರೊಟೆಕ್ಷನ್ ಅಲ್ಲಿ ಬೀಪ್ ಮಾಂಸ ಸಾಗಾಟಕ್ಕೆ ವಿರೋಧ ವ್ಯಕ್ತಪಡಿಸಿದರು. ಬೆಳಗಾವಿಯ ಆಟೋ ನಗರದಲ್ಲಿನ ಕೋಲ್ಡ್ ಸ್ಟೋರೇಜನಿಂದ ಸಾಗಾಟವಾಗಿದೆ ಎಂದು ಆರೋಪ ಕೇಳಿಬಂದಿದೆ.

ಎರಡು ಗಂಟೆಗಳ ಕಾಲ ಬಿಜೆಪಿ ಶಾಸಕರಿಂದ ಪ್ರತಿಭಟನೆ ನಡೆಯಿತು. ಪೊಲೀಸ್ ಆಯುಕ್ತ ರಾಜಪ್ಪ ವಿರುದ್ಧ ಕೆಂಡಾಕಾರಿದ ಶಾಸಕರು. ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ದೂರಿದರು.

ಇದೇ 13 ರಂದು ಬೆಳಗಾವಿಗೆ ಹೋಮ್ ಮಿನಿಸ್ಟರ್ ಬರ್ತಿದ್ದಾರೆ. ಅವತ್ತು ಬೆಳಗಾವಿ ಬಂದ್ ಮಾಡಿ, ಕಪ್ಪು ಬಟ್ಟೆ ತೋರಿಸಿ ವಿರೋಧಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಶಾಸಕ ಅಭಯ ಪಾಟೀಲ ಕಿಡಿಕಾರಿದರು.

ಎಸಿಪಿ ಎನ್‌.ವಿ.ಬರಮನಿ ಅವರಿಂದ ಶಾಸಕರ ಮನವೊಲಿಕೆ ಕಾರ್ಯ ನಡೆಯಿತು. ಆ ಬಳಿಕ ಶಾಸಕರು ಪ್ರತಿಭಟನೆ ಕೈಬಿಟ್ಟರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments