Select Your Language

Notifications

webdunia
webdunia
webdunia
webdunia

ಕರ್ನಾಟಕ ಮತ್ತೊಂದು ಕಾಶ್ಮೀರ ಆಗುತ್ತಿದೆ ಎಂದ ಬಿಜೆಪಿ ಮುಖಂಡ!

ಕರ್ನಾಟಕ ಮತ್ತೊಂದು ಕಾಶ್ಮೀರ ಆಗುತ್ತಿದೆ ಎಂದ ಬಿಜೆಪಿ ಮುಖಂಡ!
ಹಾವೇರಿ , ಶನಿವಾರ, 2 ಫೆಬ್ರವರಿ 2019 (19:06 IST)

ಕರ್ನಾಟಕ ಮತ್ತೊಂದು ಕಾಶ್ಮೀರವಾಗುತ್ತಿದೆ ಹಾಗೂ ರಾಜ್ಯದ ಜನರು ಮುಂದೆ ಏನೇನು ಆಗುತ್ತದೆಯೋ ಎನ್ನುವ ಆತಂಕದಲ್ಲಿ ಜೀವಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಹಾವೇರಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಈ ಹೇಳಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರ ಗ್ರಾಮದಲ್ಲಿ ಗಣರಾಜ್ಯೋತ್ಸವದ ವೇಳೆ ಗಲಾಟೆ ಮಾಡಿದ್ದು, ತೀವ್ರ ಖಂಡನೀಯ ಎಂದು ಶ್ರೀನಿವಾಸ್ ಪೂಜಾರಿ ತಿಳಿಸಿದರು. ಇಂದು ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದು ತೀವ್ರ ಖಂಡನೀಯ, ಉಗ್ರಗಾಮಿಗಳ ರೀತಿಯಲ್ಲಿ ಮಕ್ಕಳನ್ನು ಹೆದರಿಸಿದ್ದಾರೆ ಹಾಗೂ ಈ ಊರಿನಲ್ಲಿ ಮಕ್ಕಳು, ಪೋಷಕರು ಹೇಗೆ ಬದುಕಬೇಕು ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನೂ ಭಯದಲ್ಲಿ ಅಭದ್ರತೆಯಾಗಿ ಬದುಕಬೇಕಾದ ಸ್ಥಿತಿ ಬಂದಿದೆ. ರಾಷ್ಟ್ರಕ್ಕೆ ಗೌರವ ನೀಡುವ ಸಂದರ್ಭದಲ್ಲಿ ಪುಂಡಾಟ ಮಾಡಿದ್ದು ಅಕ್ಷಮ್ಯವಾದದ್ದು ಎಂದು ಹೇಳಿದರು. ಹಿರೂರು ಘಟನೆ ಬಗ್ಗೆ ಸದನದಲ್ಲಿ ಗಂಭೀರವಾಗಿ ಚರ್ಚಿಸುತ್ತೇನೆ ಎಂದು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಅಂಬೀಶ್ ಗೆ ಎಂಪಿ ಟಿಕೆಟ್: ಸಿದ್ದರಾಮಯ್ಯ ಹೇಳಿದ್ದೇನು?