Select Your Language

Notifications

webdunia
webdunia
webdunia
webdunia

ನಾವ್ಯಾಕೆ ಬಿಜೆಪಿಯವರ ಮನೆ ಬಾಗಿಲಿಗೆ ಹೋಗೋಣ ಎಂದು ರೇವಣ್ಣ ಹೇಳಿದ್ಯಾಕೆ?

ನಾವ್ಯಾಕೆ ಬಿಜೆಪಿಯವರ ಮನೆ ಬಾಗಿಲಿಗೆ ಹೋಗೋಣ ಎಂದು ರೇವಣ್ಣ ಹೇಳಿದ್ಯಾಕೆ?
ಹಾಸನ , ಗುರುವಾರ, 31 ಜನವರಿ 2019 (15:57 IST)
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ‌ ಜೊತೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹೆಚ್.ಡಿ.ರೇವಣ್ಣ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ನಾವ್ಯಾಕೆ ಬಿಜಿಪಿ ಅವರ ಮನೆ ಬಾಗಿಲಿಗೆ ಹೋಗೋಣಾ? ಬಿ.ಎಸ್. ಯಡಿಯೂರಪ್ಪ ಅವರ ಬಳಿ ನಾನ್ಯಾವುದೇ ಚರ್ಚೆ ನಡೆಸಿಲ್ಲ. ನಮ್ಮ ಕಾರು ಎಂದೂ ಯಡಿಯೂರಪ್ಪ ಅವರ ಮನೆ ಹತ್ತಿರ ತಿರುಗಲ್ಲ ಎಂದು ಹೇಳಿದ್ದಾರೆ.

ನಾಳೆ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಹಲವು ಪ್ರಸ್ತಾವನೆ ಸಲ್ಲಿಸಿದ್ದೇವೆ. ಯಾವುದಕ್ಕೆ ಮಣೆ ಹಾಕುತ್ತಾರೆ ಎಂಬುದನ್ನು  ನಾಳೆ ಮದ್ಯಾಹ್ನನದವರೆಗೂ ಕಾದು ನೋಡಬೇಕು ಎಂದರು.

ಸಿ.ಎಂ. ಕುಮಾರಸ್ವಾಮಿ ಅವರಂತೆ ಕೇಂದ್ರವೂ ಒಂದೇ ಹಂತದಲ್ಲಿ ಎಲ್ಲಾ ರೈತರ ಸಾಲ‌ಮನ್ನಾ ಮಾಡಲಿ ಎಂದು ಹಾಸನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿಕರನ್ನು ಮದುವೆಯಾಗುವವರಿಗೆ ಆನಗೋಡು ಗ್ರಾಮದ ಸೇವಾ ಸಹಕಾರ ಸಂಘದಿಂದ ಬಂಪರ್ ಆಫರ್