Select Your Language

Notifications

webdunia
webdunia
webdunia
webdunia

ಬಿಜೆಪಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ರೆ ಬಾರುಕೋಲಿನಿಂದ ಬುದ್ಧಿ ಕಲಿಸುವೆ ಎಂದವರಾರು?

ಬಿಜೆಪಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ರೆ ಬಾರುಕೋಲಿನಿಂದ ಬುದ್ಧಿ ಕಲಿಸುವೆ ಎಂದವರಾರು?
ದಾವಣಗೆರೆ , ಶನಿವಾರ, 28 ಜುಲೈ 2018 (17:07 IST)
ಕಾಂಗ್ರೆಸ್ ಕೆಲ ಚೇಲಾಗಳು, ರವೀಂದ್ರನಾಥ್ ಹಾಗೂ ಶಿಸ್ತಿನ ಬಿಜೆಪಿ ಪಕ್ಷದ ಬಗ್ಗೆ ಕಳ್ಳರು, ಕದೀಮರು, ಸುಳ್ಳರು ಎಂದು ಹೇಳಿಕೆ ಕೊಡುತ್ತಿದ್ದಾರೆ. ಇದೇ ರೀತಿ ಮುಂದುವರೆಸಿದರೆ, ಮುಂದಿನ ದಿನಗಳಲ್ಲಿ ಕಲ್ಲು, ಕಣಿಗೆ ಬಾರುಕೋಲು ತಗೆದುಕೊಂಡು ಬುದ್ದಿ ಕಲಿಸಬೇಕಾಗುತ್ತದೆ ಎಂದು ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಮುಖಂಡ ಧನಂಜಯ ಕಡ್ಲೇಬಾಳು ಆಕ್ರೋಶ ವ್ಯಕ್ತಪಡಿಸಿದರು.

ನಗರದ ವರದಿಗಾರರ ಕೂಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರುಬಿಜೆಪಿ ಪಕ್ಷದವರ ಮೇಲೆ ಕಾಂಗ್ರೆಸ್ ನವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಾಜಿನ ಮನೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಿದ್ದರು.

ಅದ್ರೆ ಈಗ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಚೇಲಾಗಳು ಇಲ್ಲ ಸಲ್ಲದೆ ಶಾಸಕ ರವಿಂದ್ರನಾಥ್ ಬಗ್ಗೆ ಮಾತನಾಡುತ್ತಿದ್ದಾರೆ. ಬಗ್ಗೆ ಮುಂದಿನ ದಿನಗಳಲ್ಲಿ ಹೀಗೆ ಹೇಳಿಕೆ ನೀಡಿದ್ರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದಿದ್ದಾರೆ.



 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ; ಗಡಿ ಜಿಲ್ಲೆಗೆ ಮುಟ್ಟಿದ ಬಿಸಿ