Select Your Language

Notifications

webdunia
webdunia
webdunia
webdunia

ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ
ಬೆಂಗಳೂರು , ಸೋಮವಾರ, 19 ಸೆಪ್ಟಂಬರ್ 2022 (16:48 IST)

ಸೋಮವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಈಶ್ವರಪ್ಪ ಅವರ ಮೇಲೆ ನೇರ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದರು. ಪೊಲೀಸರ ವರದಿಯಲ್ಲಿ ಕ್ಲೀನ್‌ ಚಿಟ್‌ ನೀಡಲಾಗಿರುವುದರಿಂದ ತನ್ನನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಈಶ್ವರಪ್ಪ ಅವರ ಆಗ್ರಹವಾಗಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾಗಲೀ, ಹೈಕಮಾಂಡ್‌ ಆಗಲೀ ಇದರ ಬಗ್ಗೆ ಯಾವುದೇ ಚಿಂತನೆ ನಡೆಸುತ್ತಿರುವುದು ಅವರನ್ನು ಕೆರಳಿಸಿದೆ.

ಈಶ್ವರಪ್ಪ ಅವರು ಕಳೆದ ಸೆಪ್ಟೆಂಬರ್‌ ೧೨ರಿಂದ ಆರಂಭವಾದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದಕ್ಕಿಂತ ಮೊದಲು ಸೆಪ್ಟೆಂಬರ್‌ ೧೦ರಂದು ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಸರಕಾರದ ಜನಸ್ಪಂದನ ಸಮಾವೇಶಕ್ಕೂ ಅವರು ಬಂದಿರಲಿಲ್ಲ. ಹೀಗೆ ಪಕ್ಷ ಮತ್ತು ಸರಕಾರದ ವಲಯದ ಯಾವ ಕಾರ್ಯಕ್ರಮದಲ್ಲೂ ಭಾಗವಹಿಸದಿರುವ ಮೂಲಕ ಅವರು ತಮ್ಮ ಅತೃಪ್ತಿಯನ್ನು ನೇರವಾಗಿ ತೋರಿಸಿದ್ದಾರೆ. ಈ ನಡುವೆ, ಸೆ. ೯ರಂದು ನಡೆದ ಶಿವಮೊಗ್ಗದ ಗಣೇಶೋತ್ಸವ ಮೆರವಣಿಗೆಯಲ್ಲಿ ಹಗಲು ರಾತ್ರಿ ಓಡಾಡಿದ ಕಾರಣ ಕಾಲು ನೋವಾಗಿದೆ ಎಂಬ ಕಾರಣಕ್ಕೆ ಜನಸ್ಪಂದನ ಮತ್ತು ಅಧಿವೇಶನದ ಆರಂಭದ ದಿನಗಳಲ್ಲಿ ಹಾಜರಾಗಿರಲಿಲ್ಲ ಎಂದು ಹೇಳಲಾಗಿತ್ತು. ಆದರೆ, ಈಗ ಅವರೇ ತಮ್ಮ ಗೈರುಹಾಜರಿಯ ಕಾರಣ ತೆರೆದಿಟ್ಟಿದ್ದಾರೆ.

ʻʻಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ನನಗೆ ಅಸಮಧಾನ ಇದೆ, ಅದಕ್ಕೆ ಸದನಕ್ಕೆ ಹೋಗ್ತಿಲ್ಲʼʼ ಎಂದು ಹೇಳಿದರು. ʻʻಮಂತ್ರಿ ಆಗಿಯೇ ಸದನಕ್ಕೆ ಹೋಗೋದು ಅಂತ ತೀರ್ಮಾನ ಮಾಡಿದ್ದೀರಾ?ʼʼ ಎಂದು ಕೇಳಿದಾಗ, ʻʻಅದರ ಬಗ್ಗೆ ಚರ್ಚೆ ಬೇಡʼʼ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಬಂಗಾಳದ ರಾಜ್ಯಪಾಲರಿಗೆ ಫೋಟೋ ಪೋಸ್ ಮುಖ್ಯ..!!