Select Your Language

Notifications

webdunia
webdunia
webdunia
webdunia

ನಿಷೇಧದ ನಡುವೆಯೂ ಮಂಗಳೂರು ಚಲೋ

ನಿಷೇಧದ ನಡುವೆಯೂ ಮಂಗಳೂರು ಚಲೋ
ಮಂಗಳೂರು , ಗುರುವಾರ, 7 ಸೆಪ್ಟಂಬರ್ 2017 (10:14 IST)
ಮಂಗಳೂರು: ಕರಾವಳಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಮಂಗಳೂರು ಚಲೋ ಹಮ್ಮಿಕೊಂಡಿದ್ದು, ಜ್ಯೋತಿ ವೃತ್ತದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ.

 
ರ್ಯಾಲಿ ನಡೆಸಲು ಅನುಮತಿ ಇಲ್ಲದಿದ್ದರೂ ಮಂಗಳೂರಿನ ಜ್ಯೋತಿ ಸರ್ಕಲ್ ನಲ್ಲಿ ವೇದಿಕೆ ನಿರ್ಮಿಸಲಾಗಿದ್ದು, ಜಾಥಾ ನಡೆಸಲು ಸಾವಿರಾರು ಮಂದಿ ಸೇರಿದ್ದಾರೆ. ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಆಗಮನಕ್ಕಾಗಿ ಕಾರ್ಯಕರ್ತರು ಕಾದಿದ್ದಾರೆ.

ನೆಹರೂ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿಯಿದೆ. ಆದರೆ ಬೈಕ್ ರ್ಯಾಲಿ ನಡೆಸಲು ಅನುಮತಿಯಿಲ್ಲ. ಹಾಗಿದ್ದರೂ, ಬಿಜೆಪಿ ಕಾರ್ಯಕರ್ತರು ತಮ್ಮ ಬೇಡಿಕೆ ಮುಂದಿಟ್ಟು ರ್ಯಾಲಿ ನಡೆಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ.. ನಕ್ಸಲರಿಂದ ಗೌರಿ ಲಂಕೇಶ್ ಗೆ ಬೆದರಿಕೆ ಈಮೇಲ್ ಬಂದಿತ್ತು: ಇಂದ್ರಜಿತ್ ಲಂಕೇಶ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಕ್ಸಲರಿಂದ ಗೌರಿ ಲಂಕೇಶ್ ಗೆ ಬೆದರಿಕೆ ಈಮೇಲ್ ಬಂದಿತ್ತು: ಇಂದ್ರಜಿತ್ ಲಂಕೇಶ್