Select Your Language

Notifications

webdunia
webdunia
webdunia
webdunia

ಸೋಶಿಯಲ್ ಮೀಡಿಯಾಗಳಲ್ಲಿ ವಿಕೃತ ಮನಸ್ಸುಗಳಿಗೆ ಬ್ರೇಕ್ ಹಾಕಬೇಕು: ಸುರೇಶ್ ಕುಮಾರ್

ಸೋಶಿಯಲ್ ಮೀಡಿಯಾಗಳಲ್ಲಿ ವಿಕೃತ ಮನಸ್ಸುಗಳಿಗೆ ಬ್ರೇಕ್ ಹಾಕಬೇಕು: ಸುರೇಶ್ ಕುಮಾರ್
ಬೆಂಗಳೂರು , ಬುಧವಾರ, 6 ಸೆಪ್ಟಂಬರ್ 2017 (19:09 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹೇಯ ಕೃತ್ಯ. ಅವರ ಹತ್ಯೆ ನಮಗೆ ದಿಗ್ಭ್ರಮೆ ತಂದಿದೆ. ಪ್ರಗತಿಪರರು ಪಕ್ಷದತ್ತ ಬೆರಳು ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿನ ದುಃಖಕ್ಕಿಂತ ಇವರಿಗೆ ಇದೊಂದು ಅಸ್ತ್ರವಾಗಿ ಸಿಕ್ಕಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಆರೋಪಕ್ಕೆ ಸುರೇಶ್ ಕುಮಾರ್  ಟಾಂಗ್ ನೀಡಿದರು.

ಕಲಬುರ್ಗಿ ಹತ್ಯೆ ವೇಳೆ ಕೂಡ ಇದೇ ಆರೋಪ ಬಂದಿತ್ತು. ಇಂತಹ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಸೋಶಿಯಲ್ ಮೀಡಿಯಾಗಳು ಕೂಡ ಹಾಳಾಗುತ್ತಿವೆ. ಎಲ್ಲಾ ಸ್ವಾತಂತ್ರ್ಯ ಸಿಕ್ಕಿದೆ ಅನ್ನುವಂತೆ ವರ್ತಿಸುತ್ತಾರೆ. ಅಲ್ಲಿ ಕಮೆಂಟ್ ಗಳನ್ನ ಹಾಕ್ತಾರೆ. ಇಂತಹ ವಿಕೃತ ಮನಸ್ಸುಗಳ ಮೇಲೂ ಕ್ರಮತೆಗೆದುಕೊಳ್ಳುವ ಅಗತ್ಯವಿದೆ ಎಂದು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

(ಸಿಸಿಟಿವಿ ದೃಶ್ಯ) 3 ಗುಂಡು ದೇಹ ಹೊಕ್ಕ ಬಳಿಕವೂ ಜೀವ ಉಳಿಸಿಕೊಳ್ಳಲು ಯತ್ನಿಸಿದ್ದ ಗೌರಿ