Webdunia - Bharat's app for daily news and videos

Install App

ಶ್ರದ್ಧಾ ಮರ್ಡರ್ ಕೇಸ್ ​ಗೆ ಬಿಗ್​​​ ಟ್ವಿಸ್ಟ್..!

Webdunia
ಬುಧವಾರ, 16 ನವೆಂಬರ್ 2022 (17:59 IST)
ದೇಶಾದ್ಯಂತ ಸೆನ್ಸೇಷನ್​​​ ಸೃಷ್ಠಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ಭೀಕರ ಮರ್ಡರ್ ಕೇಸ್​ಗೆ ಬಿಗ್​​​ ಟ್ವಿಸ್ಟ್​​​​ ಸಿಕ್ಕಿದೆ. 6 ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣ ಇದೀಗ ಬಯಲಿಗೆ ಬಂದಿದ್ದು, ಆ ಕೊಲೆಯನ್ನು ಮಾಡಿರುವ ರೀತಿ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ. ಅಫ್ತಾಬ್ ಜೊತೆ ಲಿವಿಂಗ್ ಟುಗೆದರ್ ರಿಲೇಷನ್​ಷಿಪ್​ನಲ್ಲಿದ್ದ ಶ್ರದ್ಧಾಳನ್ನು 35 ಪೀಸ್​ ಮಾಡಿ ದೇಹದ ತುಂಡುಗಳನ್ನು ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ. ಇದೀಗ ಈ ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮೃತ ಶ್ರದ್ಧಾಳ ಸ್ನೇಹಿತನ ಹೇಳಿಕೆ ಪ್ರಕರಣದ ಗತಿಯನ್ನೇ ಬದಲಿಸಿದೆ. ಅಫ್ತಾಬ್​ನ ಪ್ರೀತಿಯ ನಾಟಕ ಶ್ರದ್ಧಾಗೆ ತಿಳಿದಿತ್ತು. ಆದರೆ ಅವಳು ಅಷ್ಟರಲ್ಲಾಗಲೇ ಸಾವಿನ ಕದ ತಟ್ಟಿದ್ದಳು ಎಂದು ಹೇಳಿರುವ ಸ್ನೇಹಿತ, ತನ್ನ ಬಳಿ ಅವಳು ತನ್ನ ಅಳಲನ್ನು ತೋಡಿಕೊಂಡಿದ್ದಳು ಎಂದು ಹೇಳಿದ್ದಾನೆ. ಶ್ರದ್ಧಾ ನನಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ಲು. ನನ್ನನ್ನು ಈ ನರಕದ ಕೂಪದಿಂದ ಕರೆದುಕೊಂಡು ಹೋಗು. ಇಲ್ಲದಿದ್ರೆ ಅಫ್ತಾಬ್ ನನ್ನನ್ನು ಕೊಲ್ಲುತ್ತಾನೆಂದಿದ್ಲು. ಈ ವೇಳೆ ನಾನು ಅಫ್ತಾಬ್​​​​ಗೆ ಎಚ್ಚರಿಕೆ ನೀಡ್ದೆ. ಇದೇ ರೀತಿಯಲ್ಲಿ ಮುಂದುವರೆದ್ರೆ ನಾನು ಪೊಲೀಸ್ ಕಂಪ್ಲೇಟ್ ಕೊಡುವ ವಾರ್ನಿಂಗ್ ಕೊಟ್ಟೆ. ಆದ್ರೆ ಶ್ರದ್ಧಾ ಹಾಗೂ ಅಫ್ತಾಬ್ ಪರಸ್ಪರ ಅನ್ಯ ಧರ್ಮದವರಾಗಿದ್ದ ಕಾರಣ, ನಾನು ಕೇಸ್ ಕೊಡಲು ಹಿಂದೇಟು ಹಾಕಿದೆ. ಕೇಸ್ ಕೊಟ್ಟರೆ ಇವರ ಪ್ರೀತಿಗೆ ತೊಂದರೆಯಾಗ್ಬೋದು ಎಂದು ಈ ನಿರ್ಧಾರ ತೆಗೆದುಕೊಂಡೆ. ಶ್ರದ್ಧಾ ದಿನಕಳೆದಂತೆ ಅಫ್ತಾಬ್​ನನ್ನು ತೊರೆಯಲು ನಿರ್ಧರಿಸಿದ್ಲು. ಜೂನ್ ತಿಂಗಳಲ್ಲಿ ಶ್ರದ್ಧಾ ಜೊತೆ ಕೊನೆಯದಾಗಿ ಮಾತನಾಡಿದ್ದೆ ಎಂದು ಪೊಲೀಸರ ಬಳಿ ಹೇಳಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Stampede: ಇದೊಂದು ಕೆಲಸ ಮಾಡಿದ್ರೆ ಚಿನ್ನಸ್ವಾಮಿಯಲ್ಲಿ ದುರಂತವಾಗ್ತಾನೇ ಇರಲಿಲ್ಲ

ಪೊಲೀಸರಲ್ಲ ನೀವು ರಾಜೀನಾಮೆ ಕೊಡ್ಬೇಕು ಎಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹೀಗೆ ಹೇಳೋದಾ

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Chenab Railway bridge: ಪ್ರಧಾನಿ ಮೋದಿ ಉದ್ಘಾಟಿಸಿದ ಚಿನಾಬ್ ಸೇತುವೆಯ ವಿಹಂಗಮ ವಿಡಿಯೋ

Gold price today: ಅಬ್ಬಾ.. ಚಿನ್ನದ ದರ ಕೇಳಿದ್ರೇ ಶಾಕ್

ಮುಂದಿನ ಸುದ್ದಿ
Show comments