Publish Date: Tue, 25 Apr 2023 (14:00 IST)
Updated Date: Tue, 25 Apr 2023 (14:52 IST)
ಮೀನಿಗೆ ಗಾಳ ಹಾಕಿ ಕೂರಬೇಕು ಎಂಬ KPCC ಅಧ್ಯಕ್ಷ D.K. ಶಿವಕುಮಾರ್ ಹೇಳಿಕೆಗೆ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಕೆಶಿ ತಮ್ಮ ರಾಜಕೀಯ ಜೀವನ ಪ್ರಾರಂಭ ಮಾಡಿದಾಗ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು, ಈಗ ಡಿಕೆಶಿ ಆರ್ಥಿಕ ಪರಿಸ್ಥಿತಿ ಹೇಗಿದೆ ಅಂತ ನನಗೆ ಚೆನ್ನಾಗಿ ಗೊತ್ತು.. ಮೀನನ್ನು ಗಾಳ ಹಾಕಿ ಮಾಡುವ ಕಾಯಕ ಪ್ರಾಮಾಣಿಕ ಕಾಯಕ.. ನಾನು ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನೇ ಕಾಪಾಡಿಕೊಂಡು ಬಂದಿದ್ದೇನೆ..ಕೋಟ್ಯಂತರ ಹಣ ಲೂಟಿ ಮಾಡಿ ತಮ್ಮ ಸಾಮ್ರಾಜ್ಯ ಬೆಳೆಸೋದಕ್ಕಿಂತ ಮೀನು ಹಿಡಿದು ಜೀವನ ಮಾಡೋದೇ ಲೇಸು ಎಂದು ತಿರುಗೇಟು ನೀಡಿದ್ರು.