Webdunia - Bharat's app for daily news and videos

Install App

ಆಟೋ ಚಾಲಕನ ಅನುಮಾನಾಸ್ಪದ ವರ್ತನೆ: ಭಯಗೊಂಡು ಮಹಿಳೆ ಮಾಡಿದ್ದೇನು ಗೊತ್ತಾ

Krishnaveni K
ಶುಕ್ರವಾರ, 3 ಜನವರಿ 2025 (17:05 IST)
Photo Credit: X
ಬೆಂಗಳೂರು: ರಾತ್ರಿ ಹೊತ್ತು ಆಟೋ ಚಾಲಕನ ಅನುಮಾನಾಸ್ಪದ ವರ್ತನೆಯಿಂದ ಭಯಗೊಂಡ ಮಹಿಳೆ ಮಾಡಿದ್ದೇನು ಗೊತ್ತಾ? ಈ ಘಟನೆ ಬಗ್ಗೆ ಓದಿದರೆ ಶಾಕ್ ಆಗ್ತೀರಿ.

ಮಹಿಳೆಯ ಪತಿ ಈ ಬಗ್ಗೆ ಬೆಂಗಳೂರು ಪೊಲೀಸರ ಟ್ವೀಟ್ ಖಾತೆಯನ್ನು ಟ್ಯಾಗ್ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ‘ನನ್ನ ಪತ್ನಿ ಬೆಂಗಳೂರಿನ ಹೊರಮಾವು ಎಂಬಲ್ಲಿಂದ ಥಣಿಸಂದ್ರ ಕಡೆಗೆ ನಮ್ಮ ಯಾತ್ರಿ ಮೂಲಕ ಆಟೋ ಬುಕ್ ಮಾಡಿದ್ದಳು. ಆದರೆ ಚಾಲಕ ಪಾನಮತ್ತನಾಗಿದ್ದ. ಆಕೆ ಸರಿಯಾದ ಲೊಕೇಷನ್ ಹೇಳಿದ್ದರೂ ಹೆಬ್ಬಾಳ ಬಳಿ ಎಲ್ಲೋ ಅಪರಿಚಿತ ಜಾಗಕ್ಕೆ ಚಾಲಕ ಕೊಂಡೊಯ್ಯುತ್ತಿದ್ದ. ಆಕೆ ಆಟೋ ನಿಲ್ಲಿಸಲು ಹೇಳಿದರೂ ಆತ ನಿಲ್ಲಿಸಲಿಲ್ಲ. ಕೊನೆಗೆ ನನ್ನ ಪತ್ನಿ ಚಲಿಸುತ್ತಿದ್ದ ಆಟೋದಿಂದ ಕೆಳಗೆ ಹಾರಿದ್ದಳು’ ಎಂದು ಮಹಿಳೆಯ ಪತಿ ಅಝರ್ ಖಾನ್ ಟ್ವೀಟ್ ಮಾಡಿದ್ದಾರೆ. ಅದೃಷ್ಟವಶಾತ್ ಆಟೋದಿಂದ ಜಿಗಿದರೂ ಮಹಿಳೆ ಗಾಯಗಳಿಲ್ಲದೇ ಪಾರಾಗಿದ್ದಾಳೆ. ಆಕೆ ಆಟೋದಿಂದ ಜಿಗಿದ ಬಳಿಕ ಹಿಂಬಾಲಿಸಿದ್ದ ಚಾಲಕ ಮತ್ತೆ ಆಟೋ ಒಳಗೆ ಕೂರುವಂತೆ ಒತ್ತಾಯಿಸಿದ್ದ. ಆದರೆ ಆತನ ಮನವಿ ತಿರಸ್ಕರಿಸಿ ಆನ್ ಲೈನ್ ನಲ್ಲೇ ಪಾವತಿ ಮಾಡಿ ಬೇರೊಂದು ಆಟೋ ಮೂಲಕ ಮಹಿಳೆ ಮನೆ ತಲುಪಿದ್ದಾಳೆ ಎಂದು ತಿಳಿದುಬಂದಿದೆ. ಇದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ನಡೆದ ಘಟನೆ. ರಾತ್ರಿ ಆಟೋದಲ್ಲಿ ಪ್ರಯಾಣಿಸುವ ಎಷ್ಟೋ ಮಹಿಳೆಯರು ಇಂತಹ ಸಮಸ್ಯೆ ಎದುರಿಸಿರಬಹುದು. ಇದು ಮಹಿಳೆಯರ ಸುರಕ್ಷತೆ ಬಗ್ಗೆ ಎಚ್ಚರಿಕೆಯ ಕರೆಗಂಟೆಯಾಗಿ ಎಂದು ಪತಿ ಅಝರ್ ಖಾನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

Video vira: ವಿದ್ಯುತ್ ಶಾಕ್‌ನಿಂದ ಒದ್ದಾಟುತ್ತಿದ್ದ ಬಾಲಕನ ಪಾಲಿಗೆ ನಿಜವಾದ ಹೀರೋ ಆದ ಯುವಕ, ಇದಪ್ಪ ದೈರ್ಯ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಮುಂದಿನ ಸುದ್ದಿ
Show comments