ಬೆಂಗಳೂರಲ್ಲಿ ಇನ್ನು ಸಿಂಗಲ್ ಆಗಿ ಕಾರಿನಲ್ಲಿ ಓಡಾಡಿದ್ರೂ ಟ್ಯಾಕ್ಸ್: ಇದೊಂದು ಬಾಕಿ ಇತ್ತು ಎಂದ ಪಬ್ಲಿಕ್

Krishnaveni K
ಬುಧವಾರ, 1 ಅಕ್ಟೋಬರ್ 2025 (09:43 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಸರ್ಕಾರ ಪೀಕ್ ಅವರ್ ನಲ್ಲಿ ಒಬ್ಬೊಬ್ಬರೇ ಕಾರಿನಲ್ಲಿ ಓಡಾಡಿದರೂ ಟ್ಯಾಕ್ಸ್ ಹಾಕಲು ಚಿಂತನೆ ನಡೆಸಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು ಇದೊಂದು ಬಾಕಿ ಇತ್ತು ಎನ್ನುತ್ತಿದ್ದಾರೆ.

ಇದೀಗ ಕರ್ನಾಟಕದಲ್ಲಿ ಎಲ್ಲದಕ್ಕೂ ಟ್ಯಾಕ್ಸ್, ದುಬಾರಿ ದುನಿಯಾ ಎಂಬ ಸ್ಥಿತಿಯಾಗಿದೆ. ಬೆಂಗಳೂರಿಗರಿಗಂತೂ ಬಸ್, ಹಾಲು, ಮೆಟ್ರೋ ಎಲ್ಲವೂ ದುಬಾರಿ. ಕೊನೆಗೆ ಸಾರ್ವಜನಿಕರು ಬಳಸುವ ಪಬ್ಲಿಕ್ ಟಾಯ್ಲೆಟ್ ಶುಲ್ಕವೂ ಹೆಚ್ಚಾಗಿದೆ.

ಇಂತಹ ಹೊತ್ತಿನಲ್ಲೇ ಬ್ಯುಸಿ ವೇಳೆಯಲ್ಲಿ ಕಾರಿನಲ್ಲಿ ಒಬ್ಬರೇ ಕುಳಿತು ಓಡಾಡಿದರೆ ಅದಕ್ಕೂ ತೆರಿಗೆ ಹಾಕಲು ಮುಂದಾಗಿದೆ. ಒಬ್ಬರೇ ಕಾರಿನಲ್ಲಿ ಓಡಾಡುವ ಬದಲು ಸಾರ್ವಜನಿಕ ಸಾರಿಗೆಗಳನ್ನು ಬಳಸಬೇಕು. ಆಗ ವಾಹನ ದಟ್ಟಣೆಯೂ ಕಡಿಮೆಯಾಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರ.

ಆದರೆ ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಾಗಿದ್ದರೆ ಇನ್ನು ನಾವು ಒಬ್ಬರೇ ಕಾರಿನಲ್ಲಿ ಓಡಾಡುವ ಅನಿವಾರ್ಯತೆ ಬಂದರೆ ಬೇಡವೆಂದರೂ ಇನ್ನೊಬ್ಬರನ್ನು ಕರೆದುಕೊಂಡು ಹೋಗಬೇಕಾ? ಕರ್ನಾಕಟದಲ್ಲಿ ಈಗಾಗಲೇ ವಿಪರೀತ ರಸ್ತೆ ತೆರಿಗೆ ಇದೆ. ಅದರ ಮೇಲೆ ಇದು ಬೇರೇನಾ? ಇದರಿಂದ ಸಮಸ್ಯೆ ಅನುಭವಿಸುವವರು ಮಧ್ಯಮ ವರ್ಗದ ಇಲ್ಲವೇ ಪ್ರಾಮಾಣಿಕವಾಗಿ ತೆರಿಗೆ ತೆತ್ತು ಜೀವನ ಮಾಡುವ ನಾಗರಿಕರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆ ಶಿವಕುಮಾರ್

ಶೂ ಎಸೆದ ಪ್ರಕರಣ: ನನ್ನ ಸಹೋದರನಿಗೆ ತುಂಬಾನೇ ನೋವಾಗಿದೆ ಎಂದ ಸಿಜೆಐ

ಮೈಸೂರು ರೇಪ್ ಆಂಡ್ ಮರ್ಡರ್ ಕೇಸ್‌: ಆರೋಪಿಯ ಗುರುತು ಕೊನೆಗೂ ಪತ್ತೆ

ಬಿಗ್‌ಬಾಸ್‌ ಮನೆ ಹೊಸ ಹುರುಪಿನೊಂದಿಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು, ಬಿಗ್‌ಬಾಸ್ ಜ್ಯೋತಿ ಆರಲು ಅಸಾಧ್ಯ

ಮನೆಗೆ ಕರೆಸಿಕೊಂಡು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನ ಕಾಲೇಜಿಗೆ ಮುತ್ತಿಗೆ

ಮುಂದಿನ ಸುದ್ದಿ
Show comments