Webdunia - Bharat's app for daily news and videos

Install App

ರಜೆಗೆಂದು ಊರಿಗೆ ಹೊರಡುವ ಮುನ್ನ ಪೊಲೀಸ್ ಕಮಿಷನರ್ ಬಿ ದಯಾನಂದ್ ಸಲಹೆಗಳನ್ನು ಗಮನಿಸಿ

Krishnaveni K
ಬುಧವಾರ, 9 ಏಪ್ರಿಲ್ 2025 (10:08 IST)
Photo Credit: X
ಬೆಂಗಳೂರು: ಬೇಸಿಗೆ ರಜೆ ಎಂದು ಊರಿಗೆ, ಪ್ರವಾಸ ತೆರಳುವ ಮುನ್ನ ಬೆಂಗಳೂರಿಗರು ಪೊಲೀಸ್ ಕಮಿಷನರ್ ಬಿ ದಯಾನಂದ್ ನೀಡಿರುವ ಈ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿ. ಇದು ನಿಮ್ಮ ಸುರಕ್ಷತೆಗಾಗಿ.

ಬೆಂಗಳೂರು ನಗರದಲ್ಲಿ ಸಾಕಷ್ಟು ಬಾರಿ ಬೀಗ ಹಾಕಿದ ಮನೆಗೆ ಕನ್ನ ಹಾಕುವ ಪ್ರಕರಣಗಳು ನಡೆದಿವೆ. ಹೀಗಾಗಿ ಅಪರಾಧ ಕೃತ್ಯಗಳನ್ನು ತಡೆಯಲು ಬೆಂಗಳೂರಿಗರು ಕೆಲವೊಂದು ಸೂಚನೆಗಳನ್ನು ಪಾಲಿಸಬೇಕು ಎಂದು ಕಮಿಷನರ್ ಬಿ ದಯಾನಂದ್ ಸಲಹೆ ನೀಡಿದ್ದಾರೆ.

ಗೈಡ್ ಲೈನ್ಸ್ ಇಲ್ಲಿದೆ ನೋಡಿ
-ಮನೆಗೆ ಗುಣಮಟ್ಟದ ಬೀಗ ಹಾಕಿ
-ಮನೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿ
-ಬೀಗದ ಕೈಯನ್ನು ಪಕ್ಕದ ಮನೆಯಲ್ಲೋ, ಮನೆಯ ಯಾವುದೋ ಒಂದು ಭಾಗದಲ್ಲೋ ಅವಿತಿಟ್ಟು ಹೋಗಬೇಡಿ.
-ಹಲವು ದಿನಗಳಿಗೆ ಪ್ರವಾಸ ಹೋಗುವುದಿದ್ದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ.
-ವಿಶ್ವಾಸಾರ್ಹ ವ್ಯಕ್ತಿಗಳನ್ನೇ ಮನೆ ಕೆಲಸಕ್ಕೆ ನೇಮಿಸಿ.
-ಮನೆಯಲ್ಲಿ ಚಿನ್ನಾಭರಣಗಳನ್ನು ಇಟ್ಟು ಹೋಗಬೇಡಿ
-ಬೆಲೆ ಬಾಳುವ ವಸ್ತುಗಳನ್ನು ಕೆಲಸದವರ ಮುಂದೆ, ಇತರರ ಮುಂದೆ ಪ್ರದರ್ಶಿಸಬೇಡಿ.
ಪ್ರವಾಸ ಹೋಗುವುದಿದ್ದರೆ ಅಥವಾ ಮನೆಯಲ್ಲಿಯೇ ಇದ್ದರೂ ಈ ಕೆಲವೊಂದು ಸೂಚನೆಗಳನ್ನು ಪಾಲಿಸುವುದರಿಂದ ಅಪರಾಧ ಪ್ರಕರಣಗಳನ್ನು ತಕ್ಕಮಟ್ಟಿಗೆ ತಡೆಯಬಹುದು ಎಂದು ಅವರು ಸೂಚನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments