Publish Date: Wed, 22 Sep 2021 (21:12 IST)
Updated Date: Wed, 22 Sep 2021 (21:19 IST)
ಬೊಮ್ಮನಹಳ್ಳಿಯಲ್ಲಿ ನಿನ್ನೆ ನಡೆದ ಅಗ್ನಿ ದುರಂತದಲ್ಲಿ ಇಬ್ಬರು ಸಜೀವ ದಹನವಾಗಿದ್ರು. ದುರಂತದ ವೇಳೆ ಬಾಲ್ಕನಿಯಲ್ಲಿ ಕಂಬಿ ಇರುವುದರಿಂದ ಓರ್ವ ಮಹಿಳೆ ಜೀವ ಕಳೆದುಕೊಂಡಿದ್ದಾರೆ. ಘಟನೆ ಬಳಿಕ ಎಚ್ಚತ್ತ ಬಿಬಿಎಂಪಿ ವಸತಿ ಸಮುಚ್ಛಯಗಳಲ್ಲಿ ಬಾಲ್ಕನಿಯಲ್ಲಿ ಬದಲಾವಣೆಗಳು ಹಾಗೂ ಇನ್ನಿತರ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ತಡೆಗಟ್ಟಲು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಸಂಭವಿಸಿದ ಅಗ್ನಿ ದುರಂತದ ಸ್ಥಳ ತಪಾಸಣೆ ನಡೆಸಿದ ತಜ್ಞರ ಸಲಹೆಗಳ ಮೇರೆಗೆ ಪಾಲಿಕೆ ಈ ಆದೇಶ ಹೊರಡಿಸಿದೆ ಎನ್ನಲಾಗಿದೆ.