Select Your Language

Notifications

webdunia
webdunia
webdunia
webdunia

ಮದ್ದೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹವಾ ನೋಡಿದ ಮೇಲೆ ಬಿಜೆಪಿ ತಪ್ಪು ಮಾಡಿತು ಎನಿಸುತ್ತಿದೆಯೇ

Basanagowda Patil Yatnal

Krishnaveni K

ಮಂಡ್ಯ , ಶುಕ್ರವಾರ, 12 ಸೆಪ್ಟಂಬರ್ 2025 (09:37 IST)
ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟದಿಂದ ನಡೆದ ಗಲಾಟೆ ಬಳಿಕ ನಿನ್ನೆ ಬಿಜೆಪಿಯಿಂದ ಉಚ್ಛಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅಲ್ಲಿಗೆ ಭೇಟಿ ನೀಡಿದ್ದರು. ಈ ವೇಳೆ ಸೇರಿದ್ದ ಜನಸ್ತೋಮ ನೋಡಿದರೆ ಬಿಜೆಪಿ ತಪ್ಪು ಮಾಡಿತೇ ಎಂದು ನಿಮಗನಿಸಬಹುದು.

ಮದ್ದೂರಿಗೆ ಬಂದಿದ್ದ ಯತ್ನಾಳ್ ರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರ ಭಾಷಣಕ್ಕೆ ಶಿಳ್ಳೆ, ಚಪ್ಪಾಳೆಗಳು ಬೀಳುತ್ತಿದ್ದವು. ಜನರ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರೇ ಹರಸಾಹಸ ಪಡುವಂತಾಗಿತ್ತು.

ಯತ್ನಾಳ್ ಬಾಯಿ ಬಿಟ್ಟರೆ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ ಎನ್ನುವುದು ಬಿಟ್ಟರೆ ಅವರೊಬ್ಬ ಚಾರ್ಮ್ ಇರುವ ನಾಯಕ. ಕಟ್ಟಾ ಹಿಂದೂವಾದಿಗಳಿಗೆ ಅವರು ಅದ್ಭುತ ನಾಯಕ. ಇದೀಗ ಮದ್ದೂರಿನಲ್ಲಿ ಯತ್ನಾಳ್ ನೋಡಲು ಬಂದಿದ್ದ ಜನಸಾಗರ ನೋಡಿದರೆ ಬಿಜೆಪಿ ಬೆಂಬಲಿಗರಿಗೂ ಅವರನ್ನು ಉಚ್ಛಾಟನೆ ಮಾಡಿ ತಪ್ಪು ಮಾಡಿದೆವೇನೋ ಎಂದು ಒಂದು ಕ್ಷಣ ಅನಿಸಿರಬಹುದು.

ಆದರೆ ಅವರು ಬಹುಶಃ ಹೈಕಮಾಂಡ್ ಎಚ್ಚರಿಸಿದ ಮೇಲೂ ಮಾತಿಗೆ ಕಡಿವಾಣ ಹಾಕಿದ್ದರೆ ಇಂದಿಗೂ ಬಿಜೆಪಿಯಲ್ಲೇ ಇರುತ್ತಿದ್ದರು. ಆದರೆ ಮಾತು ಮನೆ ಕೆಡಿಸಿತು ಅಂತಾರಲ್ಲ, ಹಾಗೇ ಆಗಿದೆ ಅವರ ಪರಿಸ್ಥಿತಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನೂತನ ಉಪರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್ ಪ್ರಮಾಣ