ಬಪ್ಪನಾಡು ತೇರು ಬಿದ್ದ ಘಟನೆ: ಅಪಾಯದ ಎಚ್ಚರಿಕೆ ನೀಡಿದ ದೈವ

Krishnaveni K
ಭಾನುವಾರ, 27 ಏಪ್ರಿಲ್ 2025 (09:42 IST)
ಮಂಗಳೂರು: ಮುಲ್ಕಿಯ ಬಪ್ಪನಾಡು ಕ್ಷೇತ್ರದಲ್ಲಿ ಇತ್ತೀಚೆಗೆ ತೇರು ಬಿದ್ದ ಘಟನೆ ಬಗ್ಗೆ ದೈವಗಳು ಆಕ್ರೋಶ ವ್ಯಕ್ತಪಡಿಸಿದ್ದು ಅಪಾಯದ ಎಚ್ಚರಿಕೆ ನೀಡಿವೆ.

ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ರಥೋತ್ಸವದ ವೇಳೆ ರಥದ ಮೇಲ್ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿತ್ತು. ಆದರೆ ಅದೃಷ್ಟವಶಾತ್ ಯಾರಿಗೂ ಅಪಾಯವಾಗಿರಲಿಲ್ಲ. ಆದರೆ ಈ ಘಟನೆ ಅಶುಭ ಸೂಚಕ ಎಂದೇ ಎಲ್ಲರೂ ಅಂದುಕೊಂಡಿದ್ದರು.

ಇದೀಗ ಘಟನೆಗೆ ಸಂಬಂಧಿಸಿದಂತೆ ಜಾರಂದಾಯ ಮತ್ತು ಬಂಟ ದೈವಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ಇದು ಅಪಾಯದ ಮುನ್ಸೂಚನೆ ಎಂದಿವೆ. ಇದಕ್ಕೆ ಸೂಕ್ತ ಪರಿಹಾರವನ್ನೂ ಹೇಳಿವೆ.   ಒಂದು ಜೀವಕ್ಕೂ ಅಪಾಯವಾಗಲು ಬಿಟ್ಟಿಲ್ಲ ನಾನು. ಮುಂದಕ್ಕೆ ಎಲ್ಲಾ ನೋಡಿಕೊಳ್ತೇನೆ.  ನನಗಿರುವ ಅಧಿಕಾರ ಬೇರೆ ಯಾವ ದೈವಗಳಿಗೂ ಇಲ್ಲ. ಪ್ರಶ್ನಾಚಿಂತನೆ ಹಾಕಬೇಕು. ಆ ಸಂದರ್ಭದಲ್ಲಿ ನಿಮ್ಮ ನಾಲಗೆಯ ಮೂಲಕ ನಾನು ಮಾತನಾಡುತ್ತೇನೆ ಎಂದು ದೈವ ಹೇಳಿದೆ.

ದುರ್ಗಾಪರಮೇಶ್ವರಿ ಅಮ್ಮ ದುಃಖದಲ್ಲಿದ್ದಾಳೆ. ಹೋಗಿ ಅವರ ಪಾದ ಹಿಡಿಯುತ್ತೇನೆ. ಕಣ್ಣೀರು ಒರೆಸಿ ಕೂರಿಸಿದ್ದಾನೆ.  ಮುಂದಿನ ಭವಿಷ್ಯ ಒಳ್ಳೆಯದು ಮಾಡುತ್ತೇನೆ. ಯಾರಿಗೂ ಯಾವುದೇ ತೊಂದರೆ ಮಾಡಲ್ಲ ಎಂದು ಅವರಿಗೆ ಭಾಷೆ ನೀಡುತ್ತೇನೆ ಎಂದು ದೈವ ನುಡಿದಿದೆ. ಆಡಳಿತ ಮಂಡಳಿಯಿಂದ ತಪ್ಪಾಗಿದೆ ಎಂದು ದೈವ ಹೇಳಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ದೇವಸ್ಥಾನ, ಚರ್ಚ್‌ಗಳಂತೆ ಮಸೀದಿಗಳಲ್ಲೂ ಸಿಸಿಟಿವಿ ಅಳವಡಿಸಿ: ಬಿಜೆಪಿ ಸಂಸದ ಅರುಣ್ ಒತ್ತಾಯ

ಭರತನಾಟ್ಯ ಪ್ರದರ್ಶಿಸುತ್ತಲೇ ಅಂಜನಾದ್ರಿ ಬೆಟ್ಟ ಏರಿದ ನಾಟ್ಯ ಕಲಾವಿದೆ

ಮಾದಕ ವ್ಯಸನದ ಜಾಗೃತಿಗಾಗಿ ಬೆಂಗಳೂರಿನಲ್ಲಿ ವಿಶೇಷ ರ್ಯಾಲಿ‌, ಇಲ್ಲಿದೆ ಮಾಹಿತಿ

ಮದುವೆ ದಿನ ತಮಾಷೆ ನೆಪದಲ್ಲಿ ವಧು, ವರನಿಗೆ ಇದೆಂಥಾ ಗತಿ: Viral video

ಮುಂದಿನ ಸುದ್ದಿ
Show comments