Publish Date: Wed, 22 May 2019 (15:12 IST)
Updated Date: Wed, 22 May 2019 (15:19 IST)
ವಿದೇಶ ಪ್ರವಾಸದಲ್ಲಿರುವ ಸಚಿವ ಡಿ.ಕೆ.ಶಿವಕುಮಾರ ಅಲ್ಲಿಂದಲೇ ತಮ್ಮ ಖದರ್ ತೋರಿಸಿದ್ದಾರಾ ಅನ್ನೋ ಅನುಮಾನ ಈಗ ವ್ಯಕ್ತವಾಗಿದೆ.
ಬೆಂಗಳೂರು ಡೈರಿ ವಿಚಾರದಲ್ಲಿ ತಮ್ಮ ಪವರ್ ತೋರಿಸಿದ್ರಾ ಡಿ. ಕೆ. ಬ್ರದರ್ಸ್ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ.
ಫಾರಿನ್ ನಲ್ಲೇ ಕುಳಿತು ಬೆಂಗಳೂರು ಡೈರಿ ವಿಚಾರದಲ್ಲಿ ತಮ್ಮ ಖದರ್ ತೋರಿಸಿದ್ರಾ ಡಿ.ಕೆ. ಶಿವಕುಮಾರ್? ಅಂತ ಜನರು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.
ಹೆಚ್.ಡಿ. ರೇವಣ್ಣ ಹೆಸರು ಬಳಸಿಕೊಂಡು ತಮ್ಮ ಕ್ಯಾಂಡಿಡೇಟ್ ಅನ್ನು ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ ಡಿಕೆ ಸುರೇಶ್...? ಎನ್ನಲಾಗುತ್ತಿದೆ.
ರಾತ್ರೋ ರಾತ್ರಿ ಸಸ್ಪೆಂಡ್ ಆಗಿರುವ ನರಸಿಂಹಮೂರ್ತಿ ಮಾಗಡಿ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಆದರೆ ಇದೀಗ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ರಾಜಕುಮಾರ್ ಕನಕಪುರ ಕ್ಷೇತ್ರದವರು. ಹೀಗಾಗಿ ತಮ್ಮ ಕ್ಷೇತ್ರದವರನ್ನೇ ಬೆಂಗಳೂರು ಡೈರಿ ಅಧ್ಯಕ್ಷನನ್ನಾಗಿ ಮಾಡಲು ಡಿ.ಕೆ. ಬ್ರದರ್ಸ್ ಗೇಮ್ ಮಾಡಿದ್ರಾ...? ಎನ್ನುವ ಪ್ರಶ್ನೆ ಕೇಳಿಬರಲಾರಂಭಿಸಿದೆ.