Select Your Language

Notifications

webdunia
webdunia
webdunia
webdunia

ಬೆಂಗಳೂರು ಪೊಲೀಸರ ಕೆಲಸಕ್ಕೆ ರಾಜಧಾನಿಯ ಜನರಿಂದ ಶಹಬಾಸ್ ..!!!

ಬೆಂಗಳೂರು ಪೊಲೀಸರ ಕೆಲಸಕ್ಕೆ ರಾಜಧಾನಿಯ ಜನರಿಂದ ಶಹಬಾಸ್ ..!!!
ಬೆಂಗಳೂರು , ಬುಧವಾರ, 7 ಸೆಪ್ಟಂಬರ್ 2022 (16:24 IST)
ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು, ರಸ್ತೆ ಹದಗೆಟ್ಟು ಟ್ರಾಫಿಕ್​ ಸಮಸ್ಯೆ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಇದನ್ನು ಸಮರ್ಥವಾಗಿ ನಿಭಾಯಿಸಿದ ಬೆಂಗಳೂರು ಮಹಾನಗರ ಟ್ರಾಫಿಕ್ ಪೊಲೀಸರಿಗೆ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿರುವ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಹಿರಿಯ ಅಧಿಕಾರಿಗಳ‌ ಸೂಚನೆ‌ ಮೇರೆಗೆ ಟ್ರಾಫಿಕ್ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಸಂಚಾರಿ ಪೊಲೀಸರು ಮಳೆ ನಡುವೆಯೂ ರೈನ್ ಕೋರ್ಟ್ ಧರಿಸಿ ಕಾರ್ಯಾ ನಿರ್ವಹಿಸಿದ್ದಾರೆ.
 
ಎಲ್ಲಿಲ್ಲಿ ಮಳೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದಿಯೋ ಆ ಸ್ಥಳಗಳಲ್ಲಿ‌ ಪೊಲೀಸರು ಸುಗಮ ಸಂಚಾರಕ್ಕಾಗಿ‌ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದೆಡೆ ಜಲಾವೃತ್ತಗೊಂಡಿರುವ ರಸ್ತೆ ಮಾರ್ಗಗಳಲ್ಲಿ ಸಂಚಾರ ದಟ್ಟಣೆಯಾಗದಂತೆ ಬದಲಿ ಮಾರ್ಗ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿ ವಾರ್ಡ್‌ವಾರು ಕುಂದುಕೊರತೆ ಕೋಶ ಸ್ಥಾಪನೆಗೆ ಹೈಕೋರ್ಟ್ ಸೂಚನೆ