Select Your Language

Notifications

webdunia
webdunia
webdunia
webdunia

ಬೆಂಗಳೂರು ವಿಶ್ವವಿದ್ಯಾಲಯದ ಬಂದ್..!

ಬೆಂಗಳೂರು ವಿಶ್ವವಿದ್ಯಾಲಯದ ಬಂದ್..!
bangalore , ಬುಧವಾರ, 24 ಆಗಸ್ಟ್ 2022 (17:01 IST)
ರಾಜಸ್ಥಾನದಲ್ಲಿ ದಲಿತ ವಿದ್ಯಾರ್ಥಿ ಮೇಲೆ ನಡೆದ ಫೈಶಾಚಿಕ ಹಲ್ಲೆ ಖಂಡಿಸಿ ಇಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಬಂದ್ ಮಾಡಿ ಧರಣಿ ನಡೆಸುತ್ತಿದ್ದಾರೆ. 7 ವರ್ಷದ ಇಂದ್ರ ಮೇಘ್ವಾಲ್ ಎಂಬ ದಲಿತ ವಿದ್ಯಾರ್ಥಿ ಮೇಲೆ ಜುಲೈ 20 ರಂದು ಚಾಯಿಲ್ ಸಿಂಗ್ ಎಂಬ ಮನುವಾದಿ ಶಿಕ್ಷಕನಿಂದ ಪೈಶಾಚಿಕ ಹಲ್ಲೆ ನಡೆದಿದೆ.ಜೊತೆಗೆ 2002 ರ ಗೋದ್ರಾ ಹತ್ಯಾಕಾಂಡ ಪ್ರತೀಕಾರವಾಗಿ ನಡೆದ ಬಿಲ್ಕಸ್ ಬಾನು ಪ್ರಕರಣದಲ್ಲಿ ಅಪರಾದಿಗಳನ್ನು ಬಹಿರಂಗವಾಗಿ ಸನ್ಮಾನಿಸುವುದರ ಮೂಲಕ ಕೃತ್ಯವನ್ನ ಸಮರ್ಥಿಸುವ ಮನಸ್ಥಿತಿಯನ್ನ ವಿದ್ಯಾರ್ಥಿ ಒಕ್ಕೂಟ  ಒಕ್ಕೂರಿಲಿನಿಂದ ಖಂಡಿಸಿದೆ.ಸಂವಿಧಾನದ ಕಾನೂನುಗಳನ್ನ ಸಮರ್ಥವಾಗಿ ಅನುಷ್ಠಾನಗೊಳಿಸಿ ಈ ದೇಶದ ಶೋಷಿತರು ಆತ್ಮಗೌರವದಿಂದ ಬದುಕುವ ವಾತಾವರಣ ನಿರ್ಮಿಸಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಗುಂಡಿಗೆ ಬೈಕ್ ಸವಾರ ಬಲಿ ..!