Select Your Language

Notifications

webdunia
webdunia
webdunia
webdunia

ಬಿ.ಎಸ್.ಯಡಿಯೂರಪ್ಪರನ್ನು ಹಾಡಿ ಹೊಗಳಿದ ಬಿ.ಶ್ರೀರಾಮುಲು

ಬಿ.ಎಸ್.ಯಡಿಯೂರಪ್ಪರನ್ನು ಹಾಡಿ ಹೊಗಳಿದ ಬಿ.ಶ್ರೀರಾಮುಲು
ಬಳ್ಳಾರಿ , ಸೋಮವಾರ, 25 ಮೇ 2020 (21:13 IST)
ಸಿಎಂರನ್ನು ಸಚಿವ ಬಿ.ಶ್ರೀರಾಮುಲು ಹಾಡಿ ಹೊಗಳಿದ ಘಟನೆ ನಡೆದಿದೆ.

ವಿರೋಧ ಪಕ್ಷದ ಟೀಕೆ ಟಿಪ್ಪಣಿ ನಡುವೆ ಕೊರೊನಾ ವೈರಸ್ ಹರಡೋದನ್ನ ಒಂದಷ್ಟು ‌ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿ ಬೆಂಗಳೂರು ನಗರ ಆದರ್ಶ ನಗರ ಆಗುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಶ್ರಮ‌ ಹೆಚ್ಚು ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
webdunia

ರಾಜ್ಯ ಸರ್ಕಾರ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳು ನಮ್ಮ ಈ ಅಲ್ಪ ಸಾಧನೆಗೆ ಕಾರಣವೆಂದ ಸಚಿವ ಶ್ರೀರಾಮುಲು, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಆದರ್ಶ ನಗರಗಳ‌ ಪೈಕಿ ಬೆಂಗಳೂರು ಒಂದಾಗಿರೋದರ ಹಿಂದಿನ ಯಶಸ್ಸು  ಯಡಿಯೂರಪ್ಪ ಅವರಿಗೆ ಸೇರುತ್ತಿದೆ.

ಆರಂಭದಲ್ಲಿ ಥೇಟರ್, ಮಾಲ್, ಜನಸಂದಣಿ ಸೇರೋ ಪ್ರದೇಶದಲ್ಲಿ ‌ನಿಷೇಧ ಹೇರಿರೋದು ನಮಗೆ ಸಹಕಾರಿಯಾಗಿದೆ. ಅಲ್ಲದೆ ಇದಕ್ಕೆ ಕೊರೊನಾ ವಾರಿಯರ್ ಗಳ ಶ್ರಮವೂ ಸೇರಿದೆ ಎಂದರು.  

ಸೋನಿಯಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರನ್ನು ತೆಗಳುತ್ತಲೇ, ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಧಾನಿ  ನರೇಂದ್ರ ಮೋದಿ ಅವರನ್ನು ಶ್ರೀರಾಮುಲು ಹಾಡಿ ಹೊಗಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನೌಕಾಪಡೆಯ ಗಸ್ತು ಹಡಗು ಐಎನ್‌ಎಸ್ ಸುಮೇಧಾದಲ್ಲಿ ದುರ್ಘಟನೆ