Select Your Language

Notifications

webdunia
webdunia
webdunia
Sunday, 6 April 2025
webdunia

ವಂಚಕರಿಗೆ ಎಟಿಎಂ ಕಾರ್ಡ ನೀಡಿದ್ರು: ಪೊಲೀಸರ ಅತಿಥಿಯಾದ್ರು!

ಆನ್ ಲೈನ್
ಬೆಂಗಳೂರು , ಬುಧವಾರ, 31 ಅಕ್ಟೋಬರ್ 2018 (16:28 IST)
ತಮ್ಮ ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡ ನೀಡಿ ವಂಚನೆ ಮಾಡಲು ಸಹಾಯ ಮಾಡಿದ ಆರೋಪಿಗಳಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಆನ್ ಲೈನ್ ವಂಚಕರಿಗೆ ಬ್ಯಾಂಕ ಖಾತೆ ಹಾಗೂ ಎಟಿಎಂನ್ನು ಗೌರಿಬಿದನೂರಿನ ಕಮಲಾಕರ, ಎಂಜಿ ರಸ್ತೆಯ ವಿನೋದ್ ನೀಡಿದ್ದರು. ಆನ್ ಲೈನ್ ವಂಚನೆ ಮಾಡುತ್ತಿದ್ದ ಹೊಸರೋಡ್ ನ ರಾಘವೇಂದ್ರ, ವಿದ್ಯಾನಗರದ ರಾಕೇಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಂಚನೆಗೆ ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡ ನೀಡಿದ್ದವರ ಬಗ್ಗೆ ಮಾಹಿತಿ ನೀಡಿದ್ದರು.

ಈ ಸಂಬಂಧ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಆರೋಪಿಗಳನ್ನು ಕಾವಲ್ ಭೈರಸಂದ್ರದ ಬಳಿ ಬಂಧನ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ: ಅಪಸ್ವರ ಎತ್ತಿದ ಕೇಂದ್ರ ಸಚಿವ