Publish Date: Sat, 01 Jun 2019 (17:43 IST)
Updated Date: Sat, 01 Jun 2019 (17:45 IST)
ಕೃಷ್ಣಾ ನದಿ ಹೋರಾಟ ವೇದಿಕೆಯಲ್ಲಿ ಪಾಲ್ಗೊಂಡಿರುವ ಅಥಣಿ ಶಾಸಕ ಮೈತ್ರಿ ಸರಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಶಾಸಕ ಮಹೇಶ್ ಕುಮಠಳ್ಳಿ ಹೇಳಿಕೆ ನೀಡಿದ್ದು, ನನ್ನ ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ, ಸವಳು ಜವುಳು, ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಕೋರಿದ್ದೇನೆ. ನನಗೆ ಯಾವ ಸಚಿವ ಸ್ಥಾನ, ಮಂತ್ರಿಗಿರಿ ಅಥವಾ ನಿಗಮ ಮಂಡಳಿ ಬೇಕಾಗಿಲ್ಲ ಎಂದಿದ್ದಾರೆ.
ನನ್ನ ಕ್ಷೇತ್ರದ ಅಭಿವೃದ್ಧಿ ನನ್ನ ಗುರಿಯಾಗಿದೆ ಎಂದಿರುವ ಅವರು, ಸರ್ಕಾರ ಪತನದ ಮಾತನ್ನು ಬಿಜೆಪಿಯವರಿಗೆ ಕೇಳಿ ಎಂದಿದ್ದಾರೆ.
ನಮ್ಮಲ್ಲಿ ಬಂಡಾಯ ಇರುವದು ಅದು ತಾರಕಕ್ಕೆ ಏರಿದ್ದು ನಿಜ. ಆದರೆ ವರಿಷ್ಠರು ಶಮನ ಮಾಡುತ್ತಾರೆ ಅನ್ನುವ ವಿಶ್ವಾಸ ಇದೆ. ಮೈತ್ರಿ ಸರ್ಕಾರ ಸುಭದ್ರವಾಗಿದೆ ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗುವದಿಲ್ಲ ಎಂದರು.