Publish Date: Mon, 22 Mar 2021 (12:46 IST)
Updated Date: Mon, 22 Mar 2021 (12:48 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾದ ಹಿನ್ನಲೆ ಸದ್ಯ ಸೆಮಿ ಲಾಕ್ ಡೌನ್, ಲಾಕ್ ಡೌನ್ ಇಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ 2ನೇ ಅಲೆ ಈಗ ಪ್ರಾರಂಭವಾಗಿದೆ. ಸೆಮಿ ಲಾಕ್ ಡೌನ್ ಬಗ್ಗೆಯೂ ಚಿಂತನೆ ಮಾಡಿಲ್ಲ. ಈ ಸಂದರ್ಭಕ್ಕೆ ಸೆಮಿ ಲಾಕ್ ಡೌನ್, ಲಾಕ್ ಡೌನ್ ಅನ್ವಯ ಆಗಲ್ಲ ಎಂದು ಹೇಳಿದ್ದಾರೆ.
ಮಾಸ್ಕ್ ಹಾಕದಿದ್ರೆ ಮತ್ತೆ ಮಾರ್ಷಲ್ಸ್ ಬರ್ತಾರೆ. ಮತ್ತೆ ಮಾರ್ಷಲ್ ನೇಮಿಸಿ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಸಭೆ ಸಮಾರಂಭಗಳಲ್ಲಿ ಮಾಸ್ಕ್ ಕಡ್ಡಾಯ. ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ. ಮಾಸ್ಕ್ ಧರಿಸದವರಿಗೆ 250ರೂ. ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.